ಕರ್ನಾಟಕ

karnataka

ETV Bharat / jagte-raho

21 ವರ್ಷದ ಮಹಿಳೆ, ಮೂವರು ಮಕ್ಕಳು ನೇಣಿಗೆ ಶರಣು... ಹತ್ಯೆ ಮಾಡಿರುವ ಶಂಕೆ!

ಮನೆಯಲ್ಲಿ ಯಾರೂ ಇಲ್ಲದ ವೇಳೆ 21 ವರ್ಷದ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ನೇಣಿಗೆ ಶರಣಾಗಿರುವ ಘಟನೆ ನಡೆದಿದ್ದು, ಪ್ರಕರಣದ ಹಿಂದೆ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ.

By

Published : Oct 7, 2019, 7:59 PM IST

ಮಹಿಳೆ, ಮಕ್ಕಳು ಆತ್ಮಹತ್ಯೆ

ಸಾಗರ(ಮಧ್ಯಪ್ರದೇಶ):ಮನೆಯೊಂದರ ಕೋಣೆಯೊಳಗೆ 21 ವರ್ಷದ ಮಹಿಳೆ ಹಾಗೂ ಮೂವರು ಮಕ್ಕಳು ನೇಣಿಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಮತ್ತೊಂದೆಡೆ ಪ್ರಕರಣದ ಸುತ್ತ ಹತ್ಯೆ ಶಂಕೆಯೂ ವ್ಯಕ್ತವಾಗಿದೆ.

21 ವರ್ಷದ ಕುಂಟ್​ ಬಾಯ್​, ಆಕೆಯ ಮಕ್ಕಳಾದ ಪುಷ್ಪೇಂದ್ರ(5), ಎರಡೂವರೆ ವರ್ಷದ ಹರ್ಷಿತಾ ಹಾಗೂ ಒಂದೂವರೆ ವರ್ಷದ ಅಂಕಿತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಂಡ ಹರಿ ಸಿಂಗ್​ ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸ್​ ಪ್ರಕರಣ ದಾಖಲಾಗಿದೆ.

ಹೊರಗಡೆ ಹೋಗಿದ್ದ ಗಂಡ ಮನೆಗೆ ಬಂದಾಗ ಮನೆ ಬಾಗಿಲು ಒಳಗಿನಿಂದ ಲಾಕ್​ ಆಗಿದ್ದು, ಬಾಗಿಲು ಒಡೆದು ಒಳಗೆ ಹೋದಾಗ ಎಲ್ಲರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇನ್ನ ಘಟನೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಯಾರಾದ್ರೂ ಕೊಲೆ ಮಾಡಿ ಈ ರೀತಿಯಾಗಿ ನೇಣು ಹಾಕಿರಬಹುದು ಎಂದು ತಿಳಿಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details