ಕರ್ನಾಟಕ

karnataka

ETV Bharat / jagte-raho

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ : ಕುಟುಂಬದವರಿಂದ ದೂರು ದಾಖಲು..! - Latest News in Kodagu

ಸೋಮವಾರಪೇಟೆ : ಯುವಕನ ಮೃತದೇಹವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಎಳನೀರು ಗುಂಡಿಯ ಕುರುಡುವಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

the-body-of-a-young-man-was-found-in-a-hanging-state
ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

By

Published : Mar 1, 2020, 8:20 PM IST

ಕೊಡಗು/ಸೋಮವಾರಪೇಟೆ: ಯುವಕನ ಮೃತದೇಹವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಎಳನೀರು ಗುಂಡಿಯ ಕುರುಡುವಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕುರುಡುವಳ್ಳಿ ಗ್ರಾಮದ ಅವಿನಾಶ್(21) ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾದ ಯುವಕ. ಎಳನೀರುಗುಂಡಿ ಅರಣ್ಯಕ್ಕೆ ಹೊಂದಿಕೊಂಡಂತಿರುವ ಅರಣ್ಯದೊಳಗೆ ಅವಿನಾಶ್ ಶವ ಪತ್ತೆಯಾಗಿದೆ. ಈತ ಕೇಬಲ್ ಕೆಲಸಕ್ಕೆ ಹೊಗಿ ಮನೆಗೆ ಬಂದಿರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸುತ್ತಿದ್ದಾಗ ಅರಣ್ಯದಲ್ಲಿ ಶವ ಪತ್ತೆಯಾಗಿದೆ‌.‌

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
ಮೃತಪಟ್ಟಿರುವ ಅವಿನಾಶ್ ಚಿಕ್ಕಪ್ಪ ದಿವಾಕರ್ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದು ಆತ್ಮಹತ್ಯೆಯಲ್ಲ ಯಾರೊ ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details