ಕರ್ನಾಟಕ

karnataka

ETV Bharat / jagte-raho

ಲಾಕ್​ಡೌನ್​ ಸಮಯದ ಬಾಡಿಗೆ ಕೇಳಲು ಬಂದ ಮನೆ ಮಾಲೀಕನನ್ನೇ ಕೊಂದ ಭೂಪ!

ಲಾಕ್​ಡೌನ್​ ವೇಳೆ ಬಾಕಿ ಉಳಿಸಿಕೊಂಡಿದ್ದ ನಾಲ್ಕು ತಿಂಗಳ ಬಾಡಿಗೆ ಹಣವನ್ನು ಕೇಳಲು ಬಂದ ಮನೆ ಮಾಲೀಕನನ್ನು ಬಾಡಿಗೆದಾರನ ಮಗ ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

By

Published : Jul 9, 2020, 11:53 AM IST

Tenant kills landlord over lockdown rent row
ಮನೆ ಮಾಲೀಕನನ್ನೇ ಕೊಲೆಗೈದ ಭೂಪ

ಚೆನ್ನೈ: ಬಾಡಿಗೆ ಪಾವತಿಸುವಂತೆ ಕೇಳಿದ ಮನೆ ಮಾಲೀಕನನ್ನು ಬಾಡಿಗೆದಾರನ ಮಗ ಕೊಲೆ ಮಾಡಿರುವ ಘಟನೆ ಚೆನ್ನೈನ ಕುಂದ್ರಾಥೂರ್​ನಲ್ಲಿ ನಡೆದಿದೆ.

ಕುಂದ್ರಾಥೂರ್ ನಿವಾಸಿ ಗುಣಶೇಖರನ್ (50) ಕೊಲೆಗೀಡಾಗಿರುವ ಮನೆ ಮಾಲೀಕ.

ಬಾಡಿಗೆ ಕೇಳಲು ಬಂದ ಮನೆ ಮಾಲೀಕನ ಕೊಲೆ

ಘಟನೆ ಹಿನ್ನೆಲೆ:

ಲಾಕ್​ಡೌನ್​ ವೇಳೆ ಬಾಕಿ ಉಳಿಸಿಕೊಂಡಿದ್ದ ನಾಲ್ಕು ತಿಂಗಳ ಬಾಡಿಗೆ ಹಣವನ್ನು ಬಾಡಿಗೆದಾರ ಧನರಾಜ್‌ ಬಳಿ ಗುಣಶೇಖರನ್ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಅದೇ ದಿನ ರಾತ್ರಿ ಧನರಾಜ್​ನ ಮಗ ಅಜಿತ್ (21), ಗುಣಶೇಖರನ್​ನ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಗಾಯಾಳು ಮಾಲೀಕನನ್ನು ಕ್ರೋಮೆಪೇಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಜಿತ್​ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details