ಕರ್ನಾಟಕ

karnataka

ETV Bharat / jagte-raho

ಆಂಧ್ರದಲ್ಲಿ ಜೋರಾದ ಚುನಾವಣಾ ಕಾವು... ಪ್ರಚಾರಕ್ಕೆ ಹೋದ ಟಿಡಿಪಿ ಅಭ್ಯರ್ಥಿ, ಎಎಸ್​ಐಗೆ ಗುಂಡೇಟು! - undefined

ಕರ್ನೂಲ್​: ಆಂಧ್ರಪ್ರದೇಶದಲ್ಲಿ ಚುಣಾವಣಾ ಕಾವು ಬಲು ಜೋರಾಗಿದೆ. ಪ್ರಚಾರಕ್ಕೆ ತೆರಳಿದ್ದ ಅಭ್ಯರ್ಥಿಗೆ ಗುಂಡೇಟು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ.

ಟಿಡಿಪಿ ಅಭ್ಯರ್ಥಿ, ಎಎಸ್​ಐಗೆ ಗುಂಡೇಟು ಚಿತ್ರ

By

Published : Mar 16, 2019, 2:35 PM IST

ಮಂತ್ರಾಲಯಂ ತಾಲೂಕಿನ ಖಗ್ಗಲ್​ ಗ್ರಾಮದಲ್ಲಿ ತೆಲುಗು ದೇಶಂ ಪಾರ್ಟಿ ಅಭ್ಯರ್ಥಿ ತಿಕ್ಕಾರೆಡ್ಡಿ ಪ್ರಚಾರಕ್ಕೆ ಆಗಮಿಸಿದ್ದರು. ಈ ವೇಳೆ ಯುವಜನ ಶ್ರಮಿಕ ರೈತು ಕಾಂಗ್ರೆಸ್​ ಪಕ್ಷದವರು ಅಡ್ಡಿಪಡಿಸಿದ್ದಾರೆ. ಇಬ್ಬರ ಮಧ್ಯೆ ಘರ್ಷಣೆ ನಡೆದಿದೆ.

ಟಿಡಿಪಿ ಅಭ್ಯರ್ಥಿ, ಎಎಸ್​ಐಗೆ ಗುಂಡೇಟು ವಿಡಿಯೋ...

ಇನ್ನು ಎರಡು ಪಕ್ಷಗಳ ಮಧ್ಯೆ ಜಗಳವಾಗಿದ್ದು, ಟಿಡಿಪಿ ಅಭ್ಯರ್ಥಿ ತಿಕ್ಕಾರೆಡ್ಡಿ ಗನ್​ಮ್ಯಾನ್​ ಗಾಳಿಯಲ್ಲಿ ಐದು ಬಾರಿ ಗುಂಡು ಹಾರಿಸಿದ್ದಾರೆ. ಆದ್ರೆ ಈ ಗುಂಡು ಟಿಡಿಪಿ ಅಭ್ಯರ್ಥಿ ತಿಕ್ಕಾರೆಡ್ಡಿ ಕಾಲಿಗೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯಲ್ಲಿ ಮಾಧವರಂ ಎಎಸ್​ಐ ವೇಣುಗೋಪಾಲ್​ರಿಗೂ ಗುಂಡೇಟು ಬಿದ್ದಿದ್ದು, ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ.

For All Latest Updates

TAGGED:

ABOUT THE AUTHOR

...view details