ಕರ್ನಾಟಕ

karnataka

ETV Bharat / jagte-raho

ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಗಳ್ಳ ಕೊನೆಗೂ ಅಂದರ್ - ವರಿಷ್ಠಾಧಿಕಾರಿ ಶಾಂತರಾಜು ಅಭಿನಂದಿಸಿದ್ದಾರೆ

ಸರಗಳ್ಳತನ ಮಾಡಿ ಕಳೆದ 7 ವರ್ಷಗಳಿಂದ ಕೋರ್ಟ್​ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಗಳ್ಳ: ಕೊನೆಗೂ ಅಂದರ್ ಮಾಡಿದ ಖಾಕಿ ಪಡೆ

By

Published : Nov 25, 2019, 8:29 PM IST

ಶಿವಮೊಗ್ಗ: ಸರಗಳ್ಳತನ ಮಾಡಿ ಕಳೆದ 7 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2012 ರಲ್ಲಿ ಸರಗಳ್ಳತನ ಮಾಡಿ ಬಂಧನವಾಗಿದ್ದ ಶಿರಾಳಕೊಪ್ಪದ ನಿವಾಸಿ ಮಾಲತೇಶ ನಾಯ್ಕ ಕೋರ್ಟ್​ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತ ತನ್ನ ವಾಸವನ್ನು ಶಿರಾಳಕೊಪ್ಪದಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ಬದಲಾಯಿಸಿಕೊಂಡಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ವಿನೋಬಾನಗರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸರಗಳ್ಳನನ್ನು ಬಂಧಿಸುವಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ್ ಪೇದೆಗಳಾದ ಮಂಜುನಾಥ್ ಹಾಗೂ ಅವಿನಾಶ್​ರನ್ನು ವರಿಷ್ಠಾಧಿಕಾರಿ ಶಾಂತರಾಜು ಅಭಿನಂದಿಸಿದ್ದಾರೆ.

ABOUT THE AUTHOR

...view details