ಕರ್ನಾಟಕ

karnataka

ETV Bharat / jagte-raho

ಅಂತ್ಯಕ್ರಿಯೆ ತಡೆದು ಅರೆ ಬೆಂದ ಶವವನ್ನು ಮರಣೋತ್ತರ ಪರೀಕ್ಷೆಗೆ ಹೊತ್ತೊಯ್ದ ಪೊಲೀಸರು - ರಾಜಗಡ ಕ್ರೈಂ ಸುದ್ದಿ

ತನ್ನ ಪತಿಯದ್ದು ಸಹಜ ಸಾವು ಅಲ್ಲ, ಕೊಲೆ ಎಂದು ಆರೋಪಿಸಿ ಪತ್ನಿ ಪೊಲೀಸರಿಗೆ ​ದೂರು ನೀಡಿದ್ದು, ಅಂತ್ಯಕ್ರಿಯೆ ತಡೆದು ಅರೆ ಬೆಂದ ಶವವನ್ನೇ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Police stop cremation and take dead body for autopsy
ಅರೆ ಬೆಂದ ಶವವನ್ನು ಮರಣೋತ್ತರ ಪರೀಕ್ಷೆಗೆ ಹೊತ್ತೊಯ್ದ ಪೊಲೀಸರು

By

Published : Oct 12, 2020, 5:57 PM IST

ರಾಜಗಢ (ಮಧ್ಯಪ್ರದೇಶ):ಅಂತ್ಯಸಂಸ್ಕಾರ ಕಾರ್ಯವನ್ನು ನಿಲ್ಲಿಸಿದ ಪೊಲೀಸರು ಅರ್ಧ ಸುಟ್ಟ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹೊತ್ತೊಯ್ದಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದ ರಾಜಗಢದಲ್ಲಿ ನಡೆದಿದೆ.

ಅರೆ ಬೆಂದ ಶವವನ್ನು ಮರಣೋತ್ತರ ಪರೀಕ್ಷೆಗೆ ಹೊತ್ತೊಯ್ದ ಪೊಲೀಸರು

ಪ್ರೇಮ್​ ಸಿಂಗ್​ ಎಂಬವರು ಅನಾರೋಗ್ಯದಿಂದಾಗಿ ಶನಿವಾರ ಮೃತಪಟ್ಟಿದ್ದು, ಆತನ ಸಂಬಂಧಿಕರು ಭಾನುವಾರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಆದರೆ ಪತಿ ಸಾಯುವ ವೇಳೆಯಲ್ಲಿ ತವರು ಮನೆಯಲ್ಲಿದ್ದ ಪ್ರೇಮ್​ ಸಿಂಗ್​ರ ಪತ್ನಿ ರೇಖಾ ಬಾಯಿ, ಇದು ಸಹಜ ಸಾವಲ್ಲ, ಕೊಲೆ. ನನ್ನ ಗಂಡ ಸತ್ತಿರುವ ವಿಚಾರವನ್ನು ನನಗೆ ಯಾರೂ ಹೇಳಿಲ್ಲ ಎಂದು ಆರೋಪಿಸಿ ಪೊಲೀಸರಿಗೆ ​ದೂರು ನೀಡಿದ್ದಾಳೆ.

ಹೀಗಾಗಿ ತಕ್ಷಣವೇ ಪೊಲೀಸರು ಕ್ರಮ ಕೈಗೊಂಡಿದ್ದು, ಅಂತ್ಯಕ್ರಿಯೆಯನ್ನು ನಿಲ್ಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಗಢ ಪೊಲೀಸರು ತನಿಖೆ ನಡಸುತ್ತಿದ್ದಾರೆ.

ABOUT THE AUTHOR

...view details