ಕರ್ನಾಟಕ

karnataka

By

Published : Apr 29, 2019, 2:31 PM IST

ETV Bharat / jagte-raho

ಹಣಕ್ಕೆ ಬೇಡಿಕೆ ಇಟ್ಟ ಕಿಡ್ನ್ಯಾಪರ್ಸ್​ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರು

ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಕಿಡ್ನಾಪರ್​ ಹಾಗೂ ಆತನ ಗ್ಯಾಂಗ್​ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದಕ್ಕೂ ಮುನ್ನ ಕಿಡ್ನ್ಯಾಪರ್ಸ್​ಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದರು.

ಆರೋಪಿ ಮನ್ಸೂರ್ ಖಾನ್​

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜಧಾನಿಯಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಕಾಟನ್​ ಪೇಟೆ ಬಳಿ ಹಳೆ ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಕಿಡ್ನ್ಯಾಪ್​​ ಪ್ರಕರಣದ ಆರೋಪಿ ಮನ್ಸೂರ್ ಖಾನ್​ ಎಂಬುವನ ಕಾಲಿಗೆ ಪಶ್ಚಿಮ ವಿಭಾಗದ ಪೊಲೀಸರು ಗುಂಡು ಹಾರಿಸಿದ್ದಾರೆ.

ರಾಕೇಶ್ ಶರ್ಮಾ ಹಾಗೂ ಗೋಪಾಲ್ ಸಿಂಗ್ ಎಂಬುವರನ್ನು ಕಿಡ್ನ್ಯಾಪ್​ ಮಾಡಿದ್ದ ಮನ್ಸೂರ್,​ 5 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದನಂತೆ. ಈ ಬಗ್ಗೆ ಸುದ್ದಿ ತಿಳಿದು ಬಂಧಿಸಲು ತೆರಳಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಜಯಚಂದ್ರ ಹಾಗೂ ಪಿಎಸ್​ಐ ರಾಜೇಂದ್ರ ಮೇಲೆ ಹಲ್ಲೆಗೆ ಮುಂದಾಗಿದ್ದ ಎನ್ನಲಾಗುತ್ತಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಯ ಮೇಲೆ ಗುಂಡು ಹಾರಿಸುವ ಮೂಲಕ 8ಕ್ಕೂ ಅಧಿಕ ಹಳೆ ರಾಬರಿ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಮನ್ಸೂರ್​ನನ್ನ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚನ್ನಣ್ಣನವರ್

ನೇಪಾಳ ಮೂಲದ ರಾಕೇಶ್ ಶರ್ಮಾ ಹಾಗೂ ಆತನ ಸ್ನೇಹಿತ ರಾಜಸ್ಥಾನ ಮೂಲದ ಗೋಪಾಲ್ ಸಿಂಗ್​ನನ್ನ ಅಪಹರಿಸಿದ್ದ ಆರೋಪಿ ಮನ್ಸೂರ್​​ ಆ್ಯಂಡ್ ಗ್ಯಾಂಗ್,​​​ ನೇಪಾಳದಲ್ಲಿದ್ದ ರಾಕೇಶ್ ಸಹೋದರನಿಗೆ ಕರೆ ಮಾಡಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ತಕ್ಷಣ ರಾಕೇಶ್ ಸಹೋದರ ಬೆಂಗಳೂರಿನಲ್ಲೇ ವಾಸವಿದ್ದ ಸ್ನೇಹಿತ ಥಾಗ್ ಬಹದ್ದೂರ್ ಥಾಪಾಗೆ ಕರೆ ಮಾಡಿ ವಿಷಯ ತಿಳಿಸಿದ್ದಿಂದ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನು ಕೃತ್ಯದಲ್ಲಿ ಏಳು ಜನ ಭಾಗಿಯಾಗಿರುವ ಶಂಕೆ ಇದ್ದು ಸದ್ಯ ಮನ್ಸೂರ್​ ಖಾನ್ ಹಾಗೂ ಆತನ ಇನ್ನೊಬ್ಬ ಸಹಚರ ಅಬ್ದುಲ್ ಮಜೀದ್​ನನ್ನ ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details