ಕರ್ನಾಟಕ

karnataka

ETV Bharat / jagte-raho

ರಸ್ತೆ ಅಪಘಾತದಲ್ಲಿ ಸೊಸೆ - ಮೊಮ್ಮಕ್ಕಳು ಸತ್ತ ಸುದ್ದಿ ಕೇಳಿ ಹಾರಿಹೋಯ್ತು ವೃದ್ಧೆಯ ಪ್ರಾಣಪಕ್ಷಿ

ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಒಂದೇ ದಿನ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

By

Published : Jan 9, 2021, 1:29 PM IST

4 members of same family died in Uttar Pradesh
ರಸ್ತೆ ಅಪಘಾತದಲ್ಲಿ ಸೊಸೆ-ಮೊಮ್ಮಕ್ಕಳು ಸತ್ತ ಸುದ್ದಿ ಕೇಳಿ ಹಾರಿಹೋಯ್ತು ವೃದ್ಧೆಯ ಪ್ರಾಣಪಕ್ಷಿ

ಸಹರಾನ್‌ಪುರ (ಉತ್ತರ ಪ್ರದೇಶ):ರಸ್ತೆ ಅಪಘಾತದಲ್ಲಿ ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ಮೃತಪಟ್ಟ ಸುದ್ದಿ ಕೇಳಿ ಅಜ್ಜಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಹರಾನ್‌ಪುರ ಜಿಲ್ಲೆಯ ಮಜ್ರಾ ಭೋಜೇವಾಲಾ ಎಂಬ ಗ್ರಾಮದಲ್ಲಿ ಬೈಕ್​ಗೆ ಕಾರು ಡಿಕ್ಕಿ ಹೊಡೆದು ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಸಾವನ್ನಪ್ಪಿದ್ದಾರೆ. ಸೊಸೆ ಹಾಗೂ ಮೊಮ್ಮಕ್ಕಳ ಸಾವಿನ ವಿಚಾರ ಕೇಳುತ್ತಿದ್ದಂತೆಯೇ 60 ವರ್ಷದ ವೃದ್ಧೆಯ ಪ್ರಾಣಪಕ್ಷಿ ಕೂಡ ಹಾರಿಹೋಗಿದೆ.

ಇದನ್ನೂ ಓದಿ- ಶಿವಮೊಗ್ಗ: ಹೆತ್ತ ಮಕ್ಕಳನ್ನು ಕೊಂದ ತಾಯಿ ನಿಧನ

ಒಂದೇ ದಿನ ಒಂದೇ ಕುಟುಂಬದ ನಾಲ್ವರ ಸಾವಿನಿಂದಾಗಿ ಗ್ರಾಮದಲ್ಲಿ ಮೌನ ಆವರಿಸಿದೆ.

ABOUT THE AUTHOR

...view details