ಕರ್ನಾಟಕ

karnataka

ಒಂಟಿ ಜೀವನಕ್ಕೆ ಬೇಸತ್ತು ನೇಣಿಗೆ ಶರಣಾದ ವೃದ್ಧೆ

ಹೆಣ್ಣು ಮಕ್ಕಳಿಗೆ ಮದುವೆಯಾದ ನಂತರ ಒಂಟಿಯಾಗಿ ಜೀವನ ನಡೆಸುತ್ತಿದ್ದ ವೃದ್ದೆಯೊರ್ವರು ಒಂಟಿ ಜೀವನಕ್ಕೆ ಬೇಸತ್ತು ನೇಣಿಗೆ ಶರಣಾಗಿರುವ ಘಟನೆ ದೊಡ್ಡ ಬಳ್ಳಾಪುರದಲ್ಲಿ ನಡೆದಿದೆ.

By

Published : Nov 20, 2019, 2:08 AM IST

Published : Nov 20, 2019, 2:08 AM IST

ಒಂಟಿ ಜೀವನಕ್ಕೆ ಬೇಸತ್ತು ನೇಣಿಗೆ ಶರಣಾದ ವೃದ್ಧೆ

ದೊಡ್ಡಬಳ್ಳಾಪುರ :ಹೆಣ್ಣು ಮಕ್ಕಳಿಗೆ ಮದುವೆಯಾದ ನಂತರ ಒಂಟಿಯಾಗಿ ಜೀವನ ನಡೆಸುತ್ತಿದ್ದ ವೃದ್ದೆಯೋರ್ವರು ಒಂಟಿ ಜೀವನಕ್ಕೆ ಬೇಸತ್ತು ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರದ ವೀರಭದ್ರನಪಾಳ್ಯದ ರತ್ನಮ್ಮ (65) ನೇಣಿಗೆ ಶರಣಾದ ವೃದ್ದೆ. ತರಕಾರಿ ವ್ಯಾಪಾರ ಮಾಡುತ್ತಿದ್ದ ರತ್ನಮ್ಮ ಕೆಲವು ವರ್ಷಗಳ ಹಿಂದೆ ಗಂಡನನ್ನ ಕಳೆದು ಕೊಂಡಿದ್ದರು. ನಂತರ ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಒಂಟಿ ಜೀವನ ನಡೆಸುತ್ತಾ ಇದ್ದರು. ಒಂಟಿ ಜೀವನದಿಂದ ಬೇಸತ್ತ ವೃದ್ಧೆ ತನ್ನದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details