ಮಂಡ್ಯ: ಪ್ರಿಯಕರ ಕೈಕೊಟ್ಟ ಹಿನ್ನೆಲೆ ಮನನೊಂದ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ಶ್ರೀರಂಗಪಟ್ಟಣದ ಗಂಜಾಮ್ನಲ್ಲಿ ನಡೆದಿದೆ.
ಪ್ರಿಯಕರ ಕೈಕೊಟ್ಟನೆಂದು ನೇಣಿಗೆ ಶರಣಾದ ಯುವತಿ! - news kannada
ಪ್ರೇಮ ವೈಫಲ್ಯದಿಂದ ಮನನೊಂದ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ.
![ಪ್ರಿಯಕರ ಕೈಕೊಟ್ಟನೆಂದು ನೇಣಿಗೆ ಶರಣಾದ ಯುವತಿ!](https://etvbharatimages.akamaized.net/etvbharat/images/768-512-2609102-946-b0e5406c-a7a9-4f31-9007-9a854445e491.jpg)
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ
18 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಲಕ್ಷ್ಮಣ್ ಎಂಬ ಯುವಕನಿಂದ ಮೋಸ ಹೋದ ಯುವತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೋಸ ಮಾಡಿದ ಯುವಕನ ವಿರುದ್ಧ ಪೋಷಕರು ದೂರು ನೀಡಿದ್ದು, ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.