ಕರ್ನಾಟಕ

karnataka

ಬೆಳಗ್ಗೆಯೇ ಎಣ್ಣೆ ಹಾಕ್ಕೊಂಡು ಟೈಟ್​ ಆದ ಚಾಲಕ... ಮೂರು ಆಟೋಗಳಿಗೆ ಮಿನಿ ಬಸ್​ ಗುದ್ದಿ ಅವಾಂತರ

By

Published : Feb 10, 2020, 12:35 PM IST

Updated : Feb 10, 2020, 12:44 PM IST

ಇಂದು ಬೆಳ್ಳಂಬೆಳಗ್ಗೆ ಎಣ್ಣೆ ಮತ್ತಲ್ಲಿ ಮಿನಿ ಬಸ್ ಚಾಲಕನೋರ್ವ ರಸ್ತೆ ಬದಿಯಲ್ಲಿದ್ದ ಆಟೋಗಳಿಗೆ ಗುದ್ದಿ ಪುಂಡಾಟ ಮೆರೆದಿರುವ ಘಟನೆ ನಗರದ ಯಶವಂತಪುರ ರೈಲು ನಿಲ್ದಾಣದ ಬಳಿ ನಡೆದಿದೆ.

KN_BNG_02_ASSIDENT_7204498
ಎಣ್ಣೆ ಮತ್ತಲ್ಲಿ ಮಿನಿ ಬಸ್ ಚಲಾಯಿಸಿದ, ಮೂರು ಆಟೋಗೆ ಗುದ್ದಿ ಪೊಲೀಸರ ಅತಿಥಿಯಾದ...!

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಣ್ಣೆ ಮತ್ತಲ್ಲಿ ಮಿನಿ ಬಸ್ ಚಾಲಕನೋರ್ವ ರಸ್ತೆ ಬದಿಯಲ್ಲಿದ್ದ ಆಟೋಗಳಿಗೆ ಗುದ್ದಿ ಅವಾಂತರ ಸೃಷ್ಟಿಸಿರುವ ಘಟನೆ ನಗರದ ಯಶವಂತಪುರ ರೈಲು ನಿಲ್ದಾಣದ ಬಳಿ ನಡೆದಿದೆ.

ಎಣ್ಣೆ ಮತ್ತಲ್ಲಿ ಮಿನಿ ಬಸ್ ಚಲಾಯಿಸಿದ, ಮೂರು ಆಟೋಗೆ ಗುದ್ದಿ ಪೊಲೀಸರ ಅತಿಥಿಯಾದ
ಗೋರಗುಂಟೆ ಪಾಳ್ಯ ಕಡೆಯಿಂದ ಸಿಟಿ ಕಡೆಗೆ ಬರುತ್ತಿದ್ದ ಮಿನಿ ಬಸ್​ ಚಾಲಕ ವೆಂಕಟಸ್ವಾಮಿ, ಕುಡಿದ ಮತ್ತಿನಲ್ಲಿ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೂರು ಆಟೋಗಳು ಜಖಂ ಆಗಿದ್ದು ಚಾಲಕರಿಗೆ ತಲೆ, ಕಾಲು, ಕೈ ಭಾಗಗಳಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೃಷ್ಟವಶಾತ್ ಬಸ್​ನಲ್ಲಿ ಯಾರೂ ಇರದ ಕಾರಣ ಅನಾಹುತ ತಪ್ಪಿದೆ. ಸ್ಥಳಕ್ಕೆ ಯಶವಂತಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಚಾಲಕ ವೆಂಕಟಸ್ವಾಮಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
Last Updated : Feb 10, 2020, 12:44 PM IST

ABOUT THE AUTHOR

...view details