ಕರ್ನಾಟಕ

karnataka

ETV Bharat / jagte-raho

ಕಬ್ಬಿನ ಗದ್ದೆಯಲ್ಲಿ ಗಾಂಜಾ ಗಿಡ ಬೆಳೆದ ಬೆಳೆಗಾರನ ಬಂಧನ

ಜಾಗನೂರು ಗ್ರಾಮದ ಮಲ್ಲಪ್ಪ ಭೀಮಪ್ಪ ತಮ್ಮ ಜಮೀನಿನಲ್ಲಿ ಬೆಳೆದಿದ್ದ 78,000 ರೂ. ಮೌಲ್ಯದಷ್ಟು 19.500 ಕೆ.ಜಿ. ಗಾಂಜಾ ಗಿಡ ವಶಪಡಿಸಿಕೊಂಡು ಪೋಲಿಸರು ದಸ್ತಗಿರಿ ಮಾಡಿದ್ದಾರೆ.

By

Published : Oct 22, 2020, 3:41 AM IST

Farmer
ಗಾಂಜಾ ಗಿಡ ಬೆಳೆದ ಬೆಳೆಗಾರನ ಬಂಧನ

ಚಿಕ್ಕೋಡಿ: ಕಬ್ಬಿನ ಬೆಳೆಯ ಮಧ್ಯದಲ್ಲಿ 19.5 ಕೆ.ಜಿ. ಗಾಂಜಾ ಬೆಳೆದ ರೈತನನ್ನು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದಲ್ಲಿ ನಡೆದಿದೆ.

ಜಾಗನೂರು ಗ್ರಾಮದ ಮಲ್ಲಪ್ಪ ಭೀಮಪ್ಪ ತಮ್ಮ ಜಮೀನಿನಲ್ಲಿ ಬೆಳೆದಿದ್ದ 78,000 ರೂ. ಮೌಲ್ಯದಷ್ಟು 19.500 ಕೆ.ಜಿ. ಗಾಂಜಾ ಗಿಡ ವಶಪಡಿಸಿಕೊಂಡು ಪೋಲಿಸರು ದಸ್ತಗಿರಿ ಮಾಡಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details