ಕರ್ನಾಟಕ

karnataka

By

Published : Jul 16, 2019, 1:23 PM IST

ETV Bharat / jagte-raho

ಹೈಟೆನ್ಶನ್ ವಿದ್ಯುತ್ ತಂತಿ ಕಡಿದು ಬಿದ್ದು 9 ಜಾನುವಾರುಗಳ ಸಾವು

ಹೈಟೆನ್ಶನ್ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಬರೋಬ್ಬರಿ 9 ಜಾನುವಾರುಳು ಸಾವನ್ನಪ್ಪಿವೆ. ಘಟನೆಗೆ ಜೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚಾಮನೂರು ಗ್ರಾಮದ ಬಳಿ ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶದಿಂದ ಸಾವನ್ನಪ್ಪಿದ 9 ಜಾನುವಾರು

ಕಲಬುರಗಿ:ಹೈಟೆನ್ಶನ್ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ 9 ಜಾನುವಾರುಗಳು ಮೃತಪಟ್ಟ ದಾರುಣ ಘಟನೆ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದ ಬಳಿ ನಡೆದಿದೆ.

ಚಾಮನೂರು ಗ್ರಾಮದ ಬಳಿ ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶದಿಂದ ಸಾವನ್ನಪ್ಪಿದ 9 ಜಾನುವಾರು

ಗ್ರಾಮಸ್ಥರಿಗೆ ಸೇರಿದ ಹಸುಗಳು ಇವಾಗಿದ್ದು, ಸಾಮೂಹಿಕವಾಗಿ ದನಗಳು ಮೇಯಲು ಹೋದಾಗ ಅವಘಡ ಸಂಭವಿಸಿದೆ. ಹೊಲದಲ್ಲಿ ಜಾನುವಾರುಗಳು ಹುಲ್ಲು ಮೇಯುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಕಡಿದು ದನಗಳ ಮೇಲೆ ಬಿದ್ದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಒಂಭಬತ್ತು ಹಸುಗಳು ಸಾವನ್ನಪ್ಪಿವೆ.

ಮೃತಪಟ್ಟ ಜಾನುವಾರುಗಳು

ಘಟನಾ ಸ್ಥಳಕ್ಕೆ ವಾಡಿ ಪಿಎಸ್​ಐ ವಿಜಯಕುಮಾರ್ ಬಾವಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೆಸ್ಕಾಂ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಜಾನುವಾರುಗಳ ಮಾಲೀಕರಿಗೆ ಅಪಾರ ಹಾನಿಯಾಗಿದ್ದು ಜೆಸ್ಕಾಂ ಇಲಾಖೆ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹೈಟೆನ್ಶನ್ ವಿದ್ಯುತ್ ತಂತಿ ಕಡಿದು ಬಿದ್ದು 9 ಜಾನುವಾರುಗಳ ಸಾವು

ABOUT THE AUTHOR

...view details