ಕರ್ನಾಟಕ

karnataka

ETV Bharat / jagte-raho

ಪತ್ನಿ ಜೊತೆ ಸಂಬಂಧಿಯ ಹತ್ಯೆ: ಆರೋಪಿಗೆ ಮೈಸೂರು ಜಿಲ್ಲಾ ನ್ಯಾಯಾಲಯದಿಂದ ಮರಣದಂಡನೆ - ಕೊನೆಗೂ ಸೆರೆಸಿಕ್ಕ ಜೋಡಿ ಕೊಲೆ ಹಂತಕ

ಪತ್ನಿ ಹಾಗೂ ಅಕ್ಕನ ಮಗಳನ್ನು ಹತ್ಯೆಗೈದು ಪರಾರಿಯಾಗಿದ್ದ ವ್ಯಕ್ತಿಗೆ 8 ವರ್ಷದ ನಂತರ ಮೈಸೂರು ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಕೊನೆಗೂ ಸೆರೆಸಿಕ್ಕ ಜೋಡಿ ಕೊಲೆ ಹಂತಕ: ಸರಿಯಾದ ಶಿಕ್ಷೆ ನೀಡಿದ ಕೋರ್ಟ್​

By

Published : Nov 14, 2019, 11:15 AM IST

ಮೈಸೂರು: ಪತ್ನಿ ಹಾಗೂ ಅಕ್ಕನ ಮಗಳನ್ನು ಹತ್ಯೆಗೈದು ಪರಾರಿಯಾಗಿದ್ದ ವ್ಯಕ್ತಿಗೆ 8 ವರ್ಷದ ನಂತರ ಮೈಸೂರು ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ವಿಧಿಸಿದೆ.

ಮರಣ ದಂಡನೆ ಶಿಕ್ಷೆಗೆ ಗುರಿಯಾದ ಇಷಾದ್ ಪಾಷ ಉತ್ತರ ಪ್ರದೇಶ ಮೂಲದವನಾಗಿದ್ದು, ಕೆಲಸ ಅರಸಿ ಮೈಸೂರಿಗೆ ಬಂದ ಸಂದರ್ಭದಲ್ಲಿ ಇಲ್ಲಿಯ ಸಿದ್ದಿಕಿ ಬಾನು ಎಂಬ ಮಹಿಳೆಯನ್ನು ವಿವಾಹವಾಗಿದ್ದ. ಮದ್ಯ ಸೇವನೆಯ ಚಟಕ್ಕೆ ದಾಸನಾಗಿದ್ದ ಈತ 2008ರ ಮೇ 7 ರಂದು ಪತ್ನಿಯೊಂದಿಗೆ ಗಲಾಟೆ ಮಾಡಿ ಮಾರಕಾಸ್ತ್ರಗಳಿಂದ ಕತ್ತಿಗೆ ತಿವಿದು ಬರ್ಬರವಾಗಿ ಕೊಲೆ ಮಾಡಿದ್ದ. ಈ ಸಂದರ್ಭ ಮನೆಯಲ್ಲೇ ಇದ್ದ ಪತ್ನಿಯ ಅಕ್ಕನ ಮಗಳು ಸುರಾನ ಬಾನು ತಡೆಯಲು ಬಂದಾಗ ಆಕೆಗೂ ಚಾಕುವಿನಿಂದ ಇರಿದು ಆರೋಪಿ ಪರಾರಿಯಾಗಿದ್ದ.

8 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು 2017 ರ ಫೆಬ್ರವರಿ 21 ರಂದು ಉದಯಗಿರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೊಂದು 'ಅಪರೂಪದ ಪ್ರಕರಣ'ವೆಂದು ಪರಿಗಣಿಸಿದ ನ್ಯಾಯಧೀಶರಾದ ಹೊಸಮನಿ ಪುಂಡಲೀಕ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ABOUT THE AUTHOR

...view details