ಕರ್ನಾಟಕ

karnataka

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ ಮುಖಂಡನ ಗುಂಡಿಕ್ಕಿ ಹತ್ಯೆ

By

Published : Dec 31, 2020, 12:15 PM IST

ಉತ್ತರ ಪ್ರದೇಶದ ಚಿತ್ರಕೂಟದ ಪ್ರಸಿದ್ಧಪುರ್ ಗ್ರಾಮದಲ್ಲಿ ಜಿಲ್ಲಾ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಹಾಗೂ ಅವರ ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Cong leader, nephew shot dead in UP
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ ಮುಖಂಡನ ಗುಂಡಿಕ್ಕಿ ಹತ್ಯೆ

ಚಿತ್ರಕೂಟ (ಉತ್ತರ ಪ್ರದೇಶ): ಸ್ಥಳೀಯ ಕಾಂಗ್ರೆಸ್​ ಮುಖಂಡ ಹಾಗೂ ಅವರ ಸೋದರಳಿಯನನ್ನು ನೆರೆ ಮನೆಯ ವ್ಯಕ್ತಿಯೇ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ನಡೆದಿದೆ.

ಪ್ರಸಿದ್ಧಪುರ್ ಗ್ರಾಮದ ನಿವಾಸಿಯಾಗಿರುವ ಜಿಲ್ಲಾ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಅಶೋಕ್​ ಪಟೇಲ್​ (55) ಮೃತ ಕೈ ನಾಯಕ.

ಅಶೋಕ್​ ಪಟೇಲ್ ಅವರಿಗೆ ಆರೋಪಿ ಕಮಲೇಶ್​​ ಕುಮಾರ್​ ಜೊತೆ ವೈಷಮ್ಯವಿತ್ತು. ಇದೇ ಕಾರಣದಿಂದ ಮಂಗಳವಾರ ರಾತ್ರಿ ಅಶೋಕ್​ರ ಮನೆಗೆ ನುಗ್ಗಿದ ಕಮಲೇಶ್ ಅವರ ಮೇಲೆ​ ಗುಂಡು ಹಾರಿಸಿದ್ದಾನೆ. ಕೃತ್ಯವನ್ನು ತಡೆಯಲು ಬಂದ ಪಟೇಲ್​ರ ಸೋದರಳಿಯ ಶುಭಂ (28)ಗೂ ಗುಂಡಿಕ್ಕಿ ಆರೋಪಿ ಹತ್ಯೆಗೈದಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಓದಿ:ಹೊಟೇಲ್‌ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ: ಸಿಸಿಟಿವಿ ದೃಶ್ಯ

ಘಟನೆಯಿಂದ ಆಕ್ರೋಶಗೊಂಡ ಪಟೇಲ್​ ಕುಟುಂಬಸ್ಥರು ಆರೋಪಿಯ ಮನೆಗೆ ಬೆಂಕಿ ಹಚ್ಚಿ ಸುಡಲೆತ್ನಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಆರೋಪಿ ಕಮಲೇಶ್​​ ಕುಮಾರ್​ ಪರಾರಿಯಾಗಿದ್ದು, ಆತನನ್ನು ಹುಡುಕಲು ತಂಡವೊಂದನ್ನು ರಚಿಸಲಾಗಿದೆ. ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಅಂಕಿತ್​ ಮಿಠ್ಠಲ್​ ಹೇಳಿದ್ದಾರೆ.

ABOUT THE AUTHOR

...view details