ಕರ್ನಾಟಕ

karnataka

ETV Bharat / jagte-raho

ನಿಯಂತ್ರಣ ತಪ್ಪಿದ ಕಾರು ಪಲ್ಟಿ: ಇಬ್ಬರು ಯುವಕರ ದುರ್ಮರಣ - ಬೈಲಹೊಂಗಲ ತಾಲೂಕಿನ ನೇಸರಗಿ

ರಾಮದುರ್ಗದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಕಾರು ಪಲ್ಟಿ

By

Published : Jun 8, 2019, 9:09 PM IST

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಬೈಲಹೊಂಗಲ ತಾಲೂಕಿನ ನೇಸರಗಿ ಬಳಿ ನಡೆದಿದೆ.

ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಸಚಿನ್ ಮಾಳಿ(24), ಅಥಣಿ ತಾಲೂಕಿನ ಉಗಾರ್ ಖುರ್ದ್ ಗ್ರಾಮದ ಸಂತೋಷ ಮಾಳವಾಡಿ(22) ಮೃತ ದುರ್ದೈವಿಗಳು. ಕಾರು ಚಲಾಯಿಸುತ್ತಿದ್ದ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಪಲ್ಟಿಯಾಗಿ ಇಬ್ಬರು ಸಾವು

ರಾಮದುರ್ಗದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಕಾರು ಅವಘಡಕ್ಕೆ ತುತ್ತಾಗಿದೆ ಎಂಬುದು ಗೊತ್ತಾಗಿದೆ. ಮೂವರೂ ಸ್ನೇಹಿತರಾಗಿದ್ದು, ರಜೆ ಇದ್ದ ಕಾರಣ ಬೆಳಗಾವಿಗೆ ಬರುತ್ತಿದ್ದರು. ಮೂರು‌‌ ಬಾರಿ ಪಲ್ಟಿ ಹೊಡೆದ ಕಾರಣ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details