ಕರ್ನಾಟಕ

karnataka

ETV Bharat / jagte-raho

ಸಿಗ್ನಲ್ ಜಂಪ್​ಗೆ ಯತ್ನಿಸಿದ ಬೈಕ್​ ಸವಾರ ಸಾವು

ಸಿಗ್ನಲ್​ ಜಂಪ್​ ಮಾಡುವಾಗ ಗೂಡ್ಸ್​ ಆಟೋದ ಚಕ್ರಕ್ಕೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ.

By

Published : Jul 8, 2019, 7:36 PM IST

ACCIDENT

ಮೈಸೂರು: ಸಿಗ್ನಲ್‌ ದಾಟುವಾಗ ಗೂಡ್ಸ್ ಆಟೋದ ಚಕ್ರಕ್ಕೆ ಸಿಲುಕಿ‌ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಹಾರಾಣಿ ಕಾಲೇಜಿನ‌ ಸಿಗ್ನಲ್​ನಲ್ಲಿ ನಡೆದಿದೆ. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿಲ್ಲ.

ಚಕ್ರದಡಿ ಸಿಲುಕಿದ ಮೃತದೇಹವನ್ನು ಹೊರ ತೆಗೆದ ಪೊಲೀಸರು.

ಮಹಾರಾಣಿ ಕಾಲೇಜು ಹಾಗೂ ದೇವರಾಜ ಅರಸು ರಸ್ತೆಯ ಕಾಫಿ ಡೇ ಸಿಗ್ನಲ್​ನಲ್ಲಿ ಸಿಗ್ನಲ್​ ಜಂಪ್​ ಮಾಡುವ ಸಂದರ್ಭದಲ್ಲಿ ಬೈಕ್ ಸವಾರ ವೇಗವಾಗಿ ಮುನ್ನುಗ್ಗಲು ಯತ್ನಿಸಿದ್ದಾನೆ. ಆಗ ಆಯತಪ್ಪಿ ಗೂಡ್ಸ್ ಆಟೋದ ಹಿಂಬದಿ ಚಕ್ರಕ್ಕೆ ಸಿಲುಕಿದ್ದಾನೆ. ಸ್ಥಳಕ್ಕೆ ಆಗಮಿಸಿದ ದೇವರಾಜ ಸಂಚಾರಿ ಠಾಣೆಯ ಪೊಲೀಸರು, ಮೃತದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details