ಕರ್ನಾಟಕ

karnataka

ETV Bharat / jagte-raho

ಪಿಕಪ್ ಗೂಡ್ಸ್​ ವಾಹನ-ಬೈಕ್​ ನಡುವೆ ಮುಖಾಮುಖಿ‌ ಡಿಕ್ಕಿ: ಬೈಕ್ ಸವಾರ ಸಾವು - ಬೈಕ್ ಸವಾರ ಅಪಘಾತದಲ್ಲಿ ಮೃತಪಟ್ಟ

ಕೆಂಪವಾಡ ಸಕ್ಕರೆ ಕಾರ್ಖಾನೆ ಕಡೆಯಿಂದ ತನ್ನ ಗ್ರಾಮದ ಕಡೆ ತೆರಳುವಾಗ ಪಿಕಪ್ ಗೂಡ್ಸ್ ವಾಹನಕ್ಕೆ ಜೊರಾಗಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

bike accident in kagawad
ಕಾಗವಾಡ​ ಬೈಕ್ ಅಪಘಾತ

By

Published : Dec 10, 2020, 4:38 AM IST

ಚಿಕ್ಕೋಡಿ: ಪಿಕಪ್ ಸರಕು ವಾಹನ ಮತ್ತು ಬೈಕ್​ ನಡುವೆ ಮುಖಾಮುಖಿ‌ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡದಲ್ಲಿ ನಡೆದಿದೆ.

ಮೃತ ಪ್ರಮೋದ್​ ಕೋಳಿ

ಕೆಂಪವಾಡ ಶುಗರ್ ಕಾರ್ಖಾನೆಯ ಹಿಂಬದಿ ಈ ಘಟನೆ ಸಂಭವಿಸಿದ್ದು, ಗ್ರಾಮದ ಪ್ರಮೋದ್​ ಕೋಳಿ (23) ಮೃತಪಟ್ಟಿದ್ದಾರೆ. ಮೃತ ಪ್ರಮೋದ್ ಕೆಂಪವಾಡ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.

ಬೈಕ್​​-ಟೆಂಪೋ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು

ಸಕ್ಕರೆ ಕಾರ್ಖಾನೆ ಕಡೆಯಿಂದ ಕೆಂಪವಾಡ ಗ್ರಾಮದ ಕಡೆ ತೆರಳುವಾಗ ಪಿಕಪ್ ಗೂಡ್ಸ್ ವಾಹನಕ್ಕೆ ಜೊರಾಗಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details