ಕರ್ನಾಟಕ

karnataka

By

Published : Jan 1, 2021, 12:22 PM IST

ETV Bharat / jagte-raho

ಬ್ಯಾಂಕ್ ವಂಚನೆ ಪ್ರಕರಣ.. ತಮಿಳುನಾಡಿನಲ್ಲಿ 4.43 ಕೋಟಿ ರೂ.ಮೌಲ್ಯದ ಚಿನ್ನಾಭರಣ ಇಡಿ ವಶಕ್ಕೆ

ಈ ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ತಡೆ ಕಾಯ್ದೆ-2002ರ ಅಡಿ ಕೇಂದ್ರೀಯ ತನಿಖಾ ದಳದ ಬೆಂಗಳೂರು ವಿಭಾಗ ಎಫ್​ಐಆರ್​ ದಾಖಲಿಸಿತ್ತು. ಇಂಡಿಯನ್ ಮತ್ತು ಇತರ ಬ್ಯಾಂಕ್​​ಗಳಿಗೆ ಈ ಕಂಪನಿಗಳು 1340 ಕೋಟಿ ರೂ. ವಂಚಿಸಿರುವ ಆರೋಪವಿತ್ತು..

Bank fraud case
ತಮಿಳುನಾಡಿನಲ್ಲಿ 4.43 ಕೋಟಿ ರೂ.ಮೌಲ್ಯದ ಚಿನ್ನಾಭರಣ ಇಡಿ ವಶಕ್ಕೆ

ತಿರುಚಿರಾಪಲ್ಲಿ(ತಮಿಳುನಾಡು) :ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಇಲ್ಲಿನ ಎರಡು ಖಾಸಗಿ ಕಂಪನಿಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ) ₹4.43 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದೆ.

ತಿರುಚಿರಾಪಲ್ಲಿಯ ಮೆಸ್ಸರ್ಸ್ ಸೆಥರ್ ಲಿಮಿಟೆಡ್ ಹಾಗೂ ಮೆಸ್ಸರ್ಸ್ ಎನ್ಎಸ್​ಕೆ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್​​ನ ನಿರ್ದೇಶಕರ ನಿವಾಸ ಹಾಗೂ ಕಚೇರಿಯಲ್ಲಿ ಇಡಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಶೋಧದ ವೇಳೆ ಚಿನ್ನಾಭರಣ, ಆಸ್ತಿ ದಾಖಲೆಗಳು ಹಾಗೂ ಕೆಲ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: 50 ಲಕ್ಷ ಲಂಚ ತೆಗೆದುಕೊಳ್ಳುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ ಕಾನ್‌ಸ್ಟೇಬಲ್

ಈ ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ತಡೆ ಕಾಯ್ದೆ-2002ರ ಅಡಿ ಕೇಂದ್ರೀಯ ತನಿಖಾ ದಳದ ಬೆಂಗಳೂರು ವಿಭಾಗ ಎಫ್​ಐಆರ್​ ದಾಖಲಿಸಿತ್ತು. ಇಂಡಿಯನ್ ಮತ್ತು ಇತರ ಬ್ಯಾಂಕ್​​ಗಳಿಗೆ ಈ ಕಂಪನಿಗಳು 1340 ಕೋಟಿ ರೂ. ವಂಚಿಸಿರುವ ಆರೋಪವಿತ್ತು.

ಈ ಸಂಬಂಧ ತನಿಖೆ ಆರಂಭಿಸಿದ್ದ ಇಡಿ, ದಾಳಿ ನಡೆಸಿದೆ ಹಾಗೂ ತನಿಖೆ ಪ್ರಗತಿಯಲ್ಲಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details