ಕರ್ನಾಟಕ

karnataka

ETV Bharat / jagte-raho

ನೆಲಮಂಗಲ: ರಾತ್ರಿ ವೇಳೆ ಮಾರಕಾಸ್ತ್ರದೊಂದಿಗೆ ದರೋಡೆಗೆ ಸಂಚು, ನಾಲ್ವರು ಖಾಕಿ ಬಲೆಗೆ

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರ ಗಂಗೊಂಡನಹಳ್ಳಿ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಸಬ್ ಇನ್ಸ್ ಪೆಕ್ಟರ್ ದೇವಿಕಾದೇವಿ ನೇತೃತ್ವದಲ್ಲಿ ದಾಳಿ ಮಾಡಿ 8 ದರೋಡೆಕೋರರಲ್ಲಿ ನಾಲ್ವರನ್ನು ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.

By

Published : Aug 30, 2020, 3:14 PM IST

Arrest of four men for robbery Madanayakanahalli police
ನೆಲಮಂಗಲ: ರಾತ್ರಿ ವೇಳೆ ಮಾರಕಾಸ್ತ್ರದೊಂದಿಗೆ ದರೋಡೆಗೆ ಸಂಚು, ನಾಲ್ವರು ಖಾಕಿ ಬಲೆಗೆ

ನೆಲಮಂಗಲ: ರಾತ್ರಿ ವೇಳೆ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ದೋಚಲು ಹೊಂಚು ಹಾಕಿ ಕಾಯುತ್ತಿದ್ದ ದರೋಡೆಕೋರರನ್ನು ಸೆರೆ ಹಿಡಿಯುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರ ಗಂಗೊಂಡನಹಳ್ಳಿ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಸಬ್ ಇನ್ಸ್ ಪೆಕ್ಟರ್ ದೇವಿಕಾದೇವಿ ನೇತೃತ್ವದಲ್ಲಿ ದಾಳಿ ಮಾಡಿ 8 ದರೋಡೆಕೋರರಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಾದ ವಿನಯ್ ಕುಮಾರ್, ರವಿಕಿರಣ್, ಭರತ್, ಚೇತನ್​ರಿಂದ ಒಂದು ರಾಡು, ಎರಡು ಚಾಕು, ಒಂದು ದೊಣ್ಣೆ ಮತ್ತು ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ.

ABOUT THE AUTHOR

...view details