ಕರ್ನಾಟಕ

karnataka

ETV Bharat / jagte-raho

‘ಸುಸೈಡ್​ ಮಾಡಿಕೊಳ್ಳವವರು ಹೇಡಿಗಳಲ್ಲ.. ನನ್ನ ಆತ್ಮಹತ್ಯೆಗೆ ಪ್ರೀತಿಯಲ್ಲ, ಒಂಟಿತನವೇ ಕಾರಣ!’

ಸುಸೈಡ್​ ಮಾಡಿಕೊಳ್ಳವವರು ಹೇಡಿಗಳಲ್ಲ. ಅವರು ಧೈರ್ಯವಂತರು. ನನ್ನ ಆತ್ಮಹತ್ಯೆಗೆ ಪ್ರೀತಿ-ಪ್ರೇಮ ವೈಫಲ್ಯ ಕಾರಣವಲ್ಲ. ಒಂಟಿತನವೇ ನನ್ನ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಇಂಜಿನಿಯರ್​ ವಿದ್ಯಾರ್ಥಿಯೊಬ್ಬ ಡೆತ್​ನೋಟು ಬರೆದಿಟ್ಟು ಪ್ರಾಣಬಿಟ್ಟಿದ್ದಾನೆ.

By

Published : Jul 14, 2019, 3:52 PM IST

ನನ್ನ ಆತ್ಮಹತ್ಯೆಗೆ ಪ್ರೀತಿಯಲ್ಲ ಒಂಟಿತನವೇ ಕಾರಣ

ಅನಂತಪುರಂ:ಆಂಧ್ರಪ್ರದೇಶದ ಅನಂತಪುರಂ​ ಜಿಲ್ಲೆಯ ತಾಡಿಪತ್ರಿ ನಿವಾಸಿ ಸೋಮ ಭರತ್​ ಎಂಬ ಯುವಕ ಜಲಂಧರ್​ನ ಪಂಜಾಬ್​ ಪ್ರೊಫೆಷನಲ್​ ಯೂನಿವರ್ಸಿಟಿಯಲ್ಲಿ 3ನೇ ವರ್ಷದ ಇಂಜಿನಿಯರಿಂಗ್​ ಓದುತ್ತಿದ್ದ. ಪರೀಕ್ಷೆಯಲ್ಲಿ ಗ್ರೇಡ್​ ಬರದೇ ಇರುವುದರಿಂದ ಮತ್ತೊಮ್ಮೆ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದ.

ಆದರೆ, ಭರತ್‌ ಹಾಸ್ಟೆಲ್​ನಲ್ಲಿ ಒಂಟಿಯಾಗಿದ್ರಿಂದ ಬೇಡದ ಆಲೋಚನೆಗಳೆಲ್ಲ ಆತನನ್ನ ಕಾಡಿವೆ. ಓದಿನಲ್ಲಿ ಹಿಂದೆ ಬಿದ್ದಿದ್ದು ಒಂದು ಕಡೆಯಾದ್ರೇ, ಒಂಟಿತನಕ್ಕೆ ಬೇಸತ್ತಿದ್ದನಂತೆ. ಒಂಟಿತನ ಬಿಡದೇ ಕಾಡಿದ್ದರಿಂದಾಗಿ ಭರತ್​ಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬಂದಿದೆ. ಹೀಗಾಗಿ ಭರತ್​ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹಾಸ್ಟೆಲ್​ನಲ್ಲಿ ಒಂಟಿಯಾಗಿ ಇರಬೇಡಿ. ಒಂದು ಗಂಟೆಯಾದ್ರೂ ಆಟವಾಡಲು ಹೋಗಿ. ಆತ್ಮಹತ್ಯೆ ಮಾಡಿಕೊಳ್ಳವವರೆಲ್ಲ ಹೇಡಿಗಳಲ್ಲ. ಅವರೆಲ್ಲ ಧೈರ್ಯವಂತರು. ನನ್ನ ಸಾವಿಗೆ ಯಾವುದೇ ಪ್ರೀತಿ-ಪ್ರೇಮ ವೈಫಲ್ಯ ಕಾರಣವಲ್ಲ. ಒಂಟಿಯಾಗಿರುವುದರಿಂದ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಭರತ್​ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾನೆ. ಈ ಘಟನೆ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸಲಿಗೆ ಆತ್ಮಹತ್ಯೆಗೆ ಕಾರಣ ಏನು ಅನ್ನೋದರ ಕುರಿತಂತೆ ಪೊಲೀಸರು ಎಲ್ಲ ದೃಷ್ಟಿಕೋನಗಳಿಂದ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details