ಕರ್ನಾಟಕ

karnataka

ETV Bharat / jagte-raho

ಕ್ಯಾಂಟರ್​-ಬೈಕ್ ಮಧ್ಯೆ ಡಿಕ್ಕಿ: ಸವಾರ ಸಾವು

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕತ್ತಿರಿಗುಪ್ಪೆ ಬೆಸ್ಕಾಂ ಸಬ್ ಸ್ಟೇಷನ್ ಮುಂದೆ ಕ್ಯಾಂಟರ್ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ‌ ಸಾವನ್ನಪ್ಪಿದ್ದಾನೆ.

By

Published : Sep 1, 2020, 11:07 AM IST

Updated : Sep 1, 2020, 12:18 PM IST

accident
accident

ಕೋಲಾರ:ಕ್ಯಾಂಟರ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ‌ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ಜರುಗಿದೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕತ್ತಿರಿಗುಪ್ಪೆ ಬೆಸ್ಕಾಂ ಸಬ್ ಸ್ಟೇಷನ್ ಮುಂದೆ ಈ ಘಟನೆ ಜರುಗಿದ್ದು, ಮಾಲೂರು ತಾಲೂಕಿನ ಹಳೇಹಳ್ಳಿ ಗ್ರಾಮದ‌‌‌ ಸುರೇಶ್ (21) ಮೃತ ದುರ್ದೈವಿ.

ಕ್ಯಾಂಟರ್​-ಬೈಕ್ ಮಧ್ಯೆ ಡಿಕ್ಕಿ

ಸುರೇಶ್ ಮಾಲೂರು ಹೊರವಲಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಎದುರಿಗೆ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ‌ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಮಾಸ್ತಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Sep 1, 2020, 12:18 PM IST

ABOUT THE AUTHOR

...view details