ದೇವನಹಳ್ಳಿ: ಜಮೀನು ಕಲಹ ಹಿನ್ನೆಲೆ ಮಹಿಳೆಯನ್ನ ಮಚ್ಚಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕಗ್ಗಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಮೀನು ವಿವಾದ: ಮಹಿಳೆಯ ಬರ್ಬರ ಹತ್ಯೆ - ದೇವನಹಳ್ಳಿ ಕೊಲೆ ಸುದ್ದಿ
ಜಮೀನು ಕಲಹ ಹಿನ್ನೆಲೆ ಮಹಿಳೆಯನ್ನ ಮಚ್ಚಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕಗ್ಗಲಹಳ್ಳಿ ಗ್ರಾಮದಲ್ಲಿ ನಡೆದಿದೆ.
![ಜಮೀನು ವಿವಾದ: ಮಹಿಳೆಯ ಬರ್ಬರ ಹತ್ಯೆ Women Murder In Devanahalli](https://etvbharatimages.akamaized.net/etvbharat/prod-images/768-512-5479118-thumbnail-3x2-dr.jpg)
ಜಮೀನು ವಿವಾದ : ಮಹಿಳೆಯ ಬರ್ಬರ ಕೊಲೆ
ಗ್ರಾಮದ ರತ್ನಮ್ಮ (50) ಕೊಲೆಯಾದ ಮಹಿಳೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಕೊಲೆ ಮಾಡಲಾಗಿದ್ದು, ಇಂದು ಮಕ್ಕಳು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಜಮೀನು ವಿವಾದ ಹಿನ್ನೆಲೆ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದ್ದು, ಬಾಯಿಗೆ ಬಟ್ಟೆ ಕಟ್ಟಿ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ಬಳಿಕವಷ್ಟೇ ಕೊಲೆಗೆ ಸೂಕ್ತ ಕಾರಣ ತಿಳಿದು ಬರಬೇಕಿದೆ.