ಕರ್ನಾಟಕ

karnataka

ಟ್ರಕ್​ - ಬೊಲೆರೊ ಮುಖಾಮುಖಿ: ವೋಟ್​ ಮಾಡಲು ತೆರಳಿದ್ದ ನಾಲ್ವರ ದುರ್ಮರಣ

By

Published : Nov 28, 2020, 11:58 AM IST

ತಮ್ಮ ಗ್ರಾಮಕ್ಕೆ ಮತ ಚಲಾಯಿಸಲು ತೆರಳಿ ಹಿಂದಿರುಗುತ್ತಿದ್ದ ರಾಜಸ್ಥಾನದ ನಾಲ್ವರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Rajasthan accident
ಟ್ರಕ್ ಹಾಗೂ ಬೊಲೆರೊ ನಡುವೆ ಭೀಕರ ರಸ್ತೆ ಅಪಘಾತ

ಶ್ರೀಗಂಗನಗರ (ರಾಜಸ್ಥಾನ): ಟ್ರಕ್ ಹಾಗೂ ಬೊಲೆರೊ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜಸ್ಥಾನದ ಶ್ರೀಗಂಗಾನಗರದ ಸೂರತ್‌ಗರ್​​- ಬಿಕಾನೆರ್ ಹೆದ್ದಾರಿಯಲ್ಲಿ ನಡೆದಿದೆ.

ಟ್ರಕ್ ಹಾಗೂ ಬೊಲೆರೊ ನಡುವೆ ಭೀಕರ ರಸ್ತೆ ಅಪಘಾತ

ನಿನ್ನೆ ರಾತ್ರಿ ಅವಘಡ ನಡೆದಿದ್ದು, ಬೊಲೆರೊ ಚಾಲಕ ಸೇರಿ ನಾಲ್ವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಮೃತಪಟ್ಟಿರುವ ಯುವಕರು ತಮ್ಮ ಗ್ರಾಮಕ್ಕೆ ಮತ ಚಲಾಯಿಸಲು ತೆರಳಿ ಹಿಂದಿರುಗುತ್ತಿದ್ದರು, ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details