ಕರ್ನಾಟಕ

karnataka

ಭಾರತಕ್ಕೆ ರಾಯಭಾರಿ ಸ್ಥಾನ ಅತ್ಯಂತ ಪ್ರಮುಖವಾದದ್ದು: ಶ್ವೇತಭವನ

By

Published : Apr 7, 2022, 1:47 PM IST

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಲಾಸ್ ಏಂಜಲೀಸ್ ಮೇಯರ್ ಆಗಿರುವ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತದ ರಾಯಭಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದು, ಭಾರತದ ರಾಯಭಾರಿ ಸ್ಥಾನ ಅತ್ಯಂತ ಮಹತ್ವದ್ದಾಗಿದೆ ಎಂದು ಶ್ವೇತ ಭವನ ಹೇಳಿದೆ.

US envoy to India incredibly important diplomatic position White House
ಭಾರತಕ್ಕೆ ರಾಯಭಾರಿ ಸ್ಥಾನ ಅತ್ಯಂತ ಪ್ರಮುಖವಾದದ್ದು: ಶ್ವೇತಭವನ

ವಾಷಿಂಗ್ಟನ್(ಅಮೆರಿಕ):ಶ್ವೇತಭವನ ಭಾರತಕ್ಕೆ ಹೊಸ ರಾಯಭಾರಿಯನ್ನು ನೇಮಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಭಾರತದ ರಾಯಭಾರಿ ಸ್ಥಾನ ಅತ್ಯಂತ ಮಹತ್ವದ್ದಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಲಾಸ್ ಏಂಜಲೀಸ್ ಮೇಯರ್ ಆಗಿರುವ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತದ ರಾಯಭಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ. ಆದರೆ ಎರಿಕ್ ಗಾರ್ಸೆಟ್ಟಿ ಅವರ ಸಲಹೆಗಾರರಿಗೆ ಸಂಬಂಧಿಸಿದ ಲೈಂಗಿಕ ಕಿರುಕುಳ ಪ್ರಕರಣ ಮೊದಲಿಗೆ ಬಗೆಹರಿಸಲು ರಿಪಬ್ಲಿಕನ್ ಪಕ್ಷ ಒತ್ತಾಯಿಸುತ್ತಿರುವ ಕಾರಣದಿಂದ ಗಾರ್ಸೆಟ್ಟಿ ಅವರು ಭಾರತದ ರಾಯಭಾರಿಯಾಗಲು ಸ್ವಲ್ಪ ಮಟ್ಟದ ಅಡೆತಡೆಗಳು ಎದುರಾಗುತ್ತಿವೆ ಎನ್ನಲಾಗ್ತಿದೆ.

ಈ ಕುರಿತು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಮಾಧ್ಯಮಗೋಷ್ಟಿಯೊಂದರಲ್ಲಿ ಮಾಹಿತಿ ನೀಡಿದ್ದಾರೆ. ಭಾರತಕ್ಕೆ ರಾಯಭಾರಿಯ ನೇಮಕ ಮಾಡದಿರುವುದು ಅಮೆರಿಕಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆಯೇ? ರಷ್ಯಾದೊಂದಿಗೆ ಕೆಲಸ ಮಾಡದಂತೆ ಭಾರತದ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತಿದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜೆನ್ ಪ್ಸಾಕಿ 'ಅಮೆರಿಕ ಯಾವಾಗಲೂ ದೃಢೀಕೃತ ರಾಯಭಾರಿಯನ್ನು ನೇಮಿಸಲು ಆದ್ಯತೆ ನೀಡುತ್ತದೆ. ಆ ಸ್ಥಾನ ನಿಜಕ್ಕೂ ಮಹತ್ವದ್ದಾಗಿದೆ. ಈಗಲೂ ಭಾರತದೊಂದಿಗೆ ಸಂವಹನ ನಡೆಸಲು ಅನೇಕ ಮಾರ್ಗಗಳಿವೆ' ಎಂದು ಸ್ಪಷ್ಟನೆ ನೀಡಿದ್ದಾರೆ.

ಎರಿಕ್ ಗಾರ್ಸೆಟ್ಟಿ ಅವರು ಪ್ರಸ್ತುತ ಭಾರತದ ರಾಯಭಾರಿಯಾಗಿ ದೃಢೀಕರಿಸಲು ಸಾಕಷ್ಟು ಮತಗಳನ್ನು ಹೊಂದಿಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ. ಭಾರತಕ್ಕೆ ರಾಯಭಾರಿಯಾಗಿ ಸೇವೆ ಸಲ್ಲಿಸಲಿರುವ ಎರಿಕ್ ಗಾರ್ಸೆಟ್ಟಿಯ ಬಗ್ಗೆ ಡೆಮಾಕ್ರಟಿಕ್ ಪಕ್ಷ ಕಳವಳ ವ್ಯಕ್ತಪಡಿಸಿದೆ. ಬೈಡನ್ ಗಾರ್ಸೆಟ್ಟಿಯ ಅವರ ಹೆಸರನ್ನು ನಾಮನಿರ್ದೇಶನವನ್ನು ಹಿಂದೆಗೆದುಕೊಳ್ಳಬಹುದು ಮತ್ತು ಭಾರತಕ್ಕೆ ಮತ್ತೊಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಬಹುದು ಎಂದು ಆಕ್ಸಿಯೋಸ್ ವರದಿ ಮಾಡಿದೆ.

ಮೀಡಿಯಾ ಕಂಪನಿ ಪೊಲಿಟಿಕೊ ಪಡೆದ ದಾಖಲೆಯ ಪ್ರಕಾರ, ರಿಪಬ್ಲಿಕನ್ ಸೆನೆಟರ್ ಚಾರ್ಲ್ಸ್ ಗ್ರಾಸ್ಲಿ ಅವರು ಸೆನೆಟ್ ಅಲ್ಪಸಂಖ್ಯಾತ ನಾಯಕ ಮಿಚ್ ಮೆಕ್‌ಕಾನ್ನೆಲ್ ಅವರನ್ನು ತನಿಖೆ ಮುಕ್ತಾಯಗೊಳಿಸುವವರೆಗೆ ರಾಯಭಾರಿ ಸ್ಥಾನಕ್ಕೆ ನಾಮನಿರ್ದೇಶನವನ್ನು ವಿಳಂಬಗೊಳಿಸುವಂತೆ ಕೇಳಿಕೊಂಡಿದ್ದಾರೆ. ಮೇಯರ್ ಗಾರ್ಸೆಟ್ಟಿ ಸಂಪೂರ್ಣವಾಗಿ ಅರ್ಹತೆ ಹೊಂದಿರಬಹುದು. ಆದರೆ ಈ ಸಮಯದಲ್ಲಿ, ಸೆನೆಟ್ ಅವರ ಮೇಲಿನ ಆರೋಪಗಳನ್ನು ಮತ್ತಷ್ಟು ಪರಿಶೀಲಿಸಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಹಿಜಾಬ್‌ ವಿವಾದಕ್ಕೆ ಅಲ್‌ಖೈದಾ 'ಉಗ್ರ'ನುಡಿ; ಮಂಡ್ಯ ವಿದ್ಯಾರ್ಥಿನಿಯ ಗುಣಗಾನ

ABOUT THE AUTHOR

...view details