ಕರ್ನಾಟಕ

karnataka

ಶ್ರೀರಾಮ ಪ್ರಾಣ ಪ್ರತಿಷ್ಠಾ ಸಮಾರಂಭ; ಮಾರಿಷಸ್​ನಲ್ಲಿ ಜ.22ರಂದು 2 ತಾಸು ವಿಶೇಷ ರಜೆ

ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದ ಸಮಯದಲ್ಲಿ ಮಾರಿಷಸ್ ಸರ್ಕಾರ ಎರಡು ಗಂಟೆಗಳ ಕಾಲ ವಿಶೇಷ ರಜೆಯನ್ನು ಘೋಷಿಸಿದೆ.

By ANI

Published : Jan 14, 2024, 6:52 PM IST

Published : Jan 14, 2024, 6:52 PM IST

First country in the world to take 2 hours leave on 22nd Jan
First country in the world to take 2 hours leave on 22nd Jan

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ದಿನವಾದ ಜನವರಿ 22ರಂದು ಮಾರಿಷಸ್ ಸರ್ಕಾರ ತನ್ನ ಉದ್ಯೋಗಿಗಳಿಗೆ 2 ಗಂಟೆಗಳ ಅವಧಿಯ ವಿಶೇಷ ರಜೆ ಮಂಜೂರು ಮಾಡಿದೆ. ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ಸಲುವಾಗಿ ಹಿಂದೂ ಧರ್ಮೀಯರಿಗೆ ಈ ವಿಶೇಷ ರಜಾ ಸೌಲಭ್ಯ ನೀಡಲಾಗಿದೆ.

"ಭಾರತದಲ್ಲಿ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ, ಸೇವೆಯ ಅವಶ್ಯಕತೆಗಳಿಗೆ ಒಳಪಟ್ಟು, 2024ರ ಜನವರಿ 22ರ ಸೋಮವಾರ ಹಿಂದೂ ಧರ್ಮದ ಸಾರ್ವಜನಿಕ ಅಧಿಕಾರಿಗಳಿಗೆ ಮಧ್ಯಾಹ್ನ 2 ಗಂಟೆಯಿಂದ ಎರಡು ಗಂಟೆಗಳ ವಿಶೇಷ ರಜೆ ನೀಡಲು ಕ್ಯಾಬಿನೆಟ್ ಒಪ್ಪಿಕೊಂಡಿದೆ. ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಅಯೋಧ್ಯೆಯಲ್ಲಿ ಭಗವಾನ್ ರಾಮನ ಮರಳುವಿಕೆಯನ್ನು ಸಂಕೇತಿಸುವ ಐತಿಹಾಸಿಕ ಘಟನೆಯಾಗಿದೆ" ಎಂದು ಮಾರಿಷಸ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಅಯೋಧ್ಯೆಯ ಭವ್ಯವಾದ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮನ 'ಪ್ರಾಣ ಪ್ರತಿಷ್ಠಾ' ಬಗ್ಗೆ ದೇಶಾದ್ಯಂತ ಉತ್ಸಾಹ ಹೆಚ್ಚುತ್ತಿದೆ. ಜನವರಿ 22ರಂದು ಪ್ರತಿಷ್ಠಾಪನಾ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಪ್ರತಿಷ್ಠಾಪನಾ ಸಮಾರಂಭವು ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ ನಲ್ಲಿ ನೇರ ಪ್ರಸಾರವಾಗಲಿದೆ. 2020 ರಲ್ಲಿ ಭೂಮಿ ಪೂಜೆ ಸಮಾರಂಭದ ನಂತರ ಟೈಮ್ಸ್ ಸ್ಕ್ವೇರ್ ಜಾಹೀರಾತು ಫಲಕಗಳಲ್ಲಿ ಭಗವಾನ್ ಶ್ರೀರಾಮನನ್ನು ಪ್ರದರ್ಶಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.

ಅಮೆರಿಕದ ವಿಎಚ್​ಪಿ ವಿಭಾಗವು ಯುಎಸ್​ನ ವಿವಿಧ ರಾಜ್ಯಗಳ ಹಿಂದೂಗಳ ಸಹಭಾಗಿತ್ವದಲ್ಲಿ ಸಮಾರಂಭವನ್ನು ಆಚರಿಸಲು 40 ಕ್ಕೂ ಹೆಚ್ಚು ಬಿಲ್​ಬೋರ್ಡ್​ಗಳನ್ನು ಸ್ಥಾಪಿಸಿದೆ. ಈ ಬಿಲ್​ಬೋರ್ಡ್​ಗಳನ್ನು (ಜಾಹೀರಾತು ಫಲಕ) ಟೆಕ್ಸಾಸ್, ಇಲಿನಾಯ್ಸ್, ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಜಾರ್ಜಿಯಾದಲ್ಲಿ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಲಾಗಿದೆ.

ಅಯೋಧ್ಯೆಯ ಶ್ರೀ ರಾಮ ಮಂದಿರದ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಸಂದರ್ಭದಲ್ಲಿ ಭಾರತದ ಅನೇಕ ರಾಜ್ಯಗಳು ರಜಾದಿನ ಘೋಷಿಸಿವೆ. ಛತ್ತೀಸಗಢದ ವಿಷ್ಣು ದೇವ್ ಸಾಯಿ ನೇತೃತ್ವದ ಸರ್ಕಾರವು ಜನವರಿ 22 ರಂದು ರಾಜ್ಯಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ. ಕ್ರಿಕೆಟ್​ನ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ, ಬಾಲಿವುಡ್ ತಾರೆಯರಾದ ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಬಿಲಿಯನೇರ್ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: ಮೆಕ್ಕೆಜೋಳದಲ್ಲಿ ಮೂಡಿಬಂದ ರಾಮಮಂದಿರ-ವಿಡಿಯೋ

ABOUT THE AUTHOR

...view details