ಕರ್ನಾಟಕ

karnataka

ETV Bharat / international

ಚಳಿಗಾಲದ ಚಂಡಮಾರುತಕ್ಕೆ ನಲುಗಿದ ಜನ.. ಮೂವರ ಸಾವು, 12 ಜನ ಕಾಣೆ - ನಗರಕ್ಕೆ ಚಂಡಮಾರತ ಅಪ್ಪಳಿಸಿದೆ

ಚಳಿಗಾಲದ ಚಂಡಮಾರುತಕ್ಕೆ ಬ್ರೆಜಿಲ್​ ವಾಸಿಗಳು ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಮೂವರು ಮೃತಪಟ್ಟಿದ್ದು, 12 ಜನ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಲ್ಲಿನ ಸರ್ಕಾರ ಖಚಿತ ಪಡಿಸಿದೆ.

Severe storm kills 3 in southern Brazil  Winter storm hit to Brazil  Cyclone hit to Sao Paulo  ಚಳಿಗಾಲದ ಚಂಡಮಾರುತಕ್ಕೆ ನಲುಗಿದ ಜನ  ಚಂಡಮಾರುತಕ್ಕೆ ಬ್ರೆಜಿಲ್​ ವಾಸಿಗಳು ತತ್ತರ  ಈಗಾಗಲೇ ಮೂವರು ಮೃತ  ರಸ್ತೆ ಸಂಚಾರ ಕಡಿತ  ನಗರಕ್ಕೆ ಚಂಡಮಾರತ ಅಪ್ಪಳಿಸಿದೆ  ಚಂಡಮಾರುತದ ಭೀಕರತೆಯನ್ನು ಅರಿತ ರಾಜ್ಯ ಸರ್ಕಾರ
ಚಳಿಗಾಲದ ಚಂಡಮಾರುತಕ್ಕೆ ನಲುಗಿದ ಜನ

By

Published : Jun 17, 2023, 7:37 AM IST

ಸಾವೊ ಪಾಲೊ, ಬ್ರೆಜಿಲ್​:ಬ್ರೆಜಿಲ್​ಗೆ ಚಳಿಗಾಲದ ಚಂಡಮಾರುತ ಅಪ್ಪಳಿಸಿದೆ. ಚಂಡಮಾರುತದ ಭೀಕರತೆಗೆ ಮೂವರು ಸಾವನ್ನಪ್ಪಿದ್ದು, 12 ಜನರು ಕಾಣೆಯಾಗಿದ್ದಾರೆ. ಅಲ್ಲಲ್ಲಿ ಮರಗಳು ಬಿದ್ದಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ. ಅಷ್ಟೇ ಅಲ್ಲ ಕೆಲವೊಂದು ನಗರಗಳಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಿರುವುದು ವರದಿಯಾಗಿದೆ.

ಚಳಿಗಾಲದ ಚಂಡಮಾರುತವು ಈ ಪ್ರದೇಶಕ್ಕೆ ಅಪ್ಪಳಿಸಿದ ನಂತರ ಮೂರು ಜನರು ಸಾವನ್ನಪ್ಪಿದ್ದು, ಪ್ರಸ್ತುತ 12 ಮಂದಿ ಕಾಣೆಯಾಗಿದ್ದಾರೆ ಎಂದು ದಕ್ಷಿಣ ಬ್ರೆಜಿಲ್ ರಾಜ್ಯದ ರಿಯೊ ಗ್ರಾಂಡೆ ಡೊ ಸುಲ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ಸಾವೊ ಲಿಯೋಪೋಲ್ಡೊ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದು, ರಾಜ್ಯದ ಕರಾವಳಿಯಲ್ಲಿರುವ ಮ್ಯಾಕ್ವಿನ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಗವರ್ನರ್ ಎಡ್ವರ್ಡೊ ಲೈಟ್ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ನಗರಕ್ಕೆ ಚಂಡಮಾರತ ಅಪ್ಪಳಿಸಿದೆ. ಈ ಸಮಯದಲ್ಲಿ ನಾವು ಕಾಣೆಯಾದವರನ್ನು ಪತ್ತೆ ಮಾಡುವುದು ಮತ್ತು ಪ್ರವಾಹದಿಂದಾಗಿ ಇನ್ನೂ ಪ್ರತ್ಯೇಕವಾಗಿರುವ ಜನರನ್ನು ಉಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಲೈಟ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಬಿಕ್ಕಟ್ಟನ್ನು ನಿಭಾಯಿಸಲು ಫೆಡರಲ್ ಸಹಾಯ ಹಸ್ತ ಚಾಚಿದೆ ಎಂದು ಹೇಳಿದರು.

ಚಂಡಮಾರುತದ ಭೀಕರತೆಯನ್ನು ಅರಿತ ರಾಜ್ಯ ಸರ್ಕಾರ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತು. ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಇನ್ನೂ ಹಲವಾರು ರಸ್ತೆಗಳನ್ನು ನಿರ್ಬಂಧಿಸಲಾಯಿತು. ರಾಜ್ಯದ ಪ್ರಮುಖ ನಗರಗಳಿಗೆ ವಿಮಾನಗಳನ್ನು ದಿನವಿಡೀ ರದ್ದುಗೊಳಿಸಲಾಯಿತು. ರಾಜ್ಯದಾದ್ಯಂತ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿತ್ತು. ಹೀಗೆ ತಾವು ತೆಗೆದುಕೊಂಡ ತಾತ್ಕಲಿಕ ನಿರ್ಣಯದಿಂದ ಕೆಲವೊಂದು ಸಂಭವಿಸಬೇಕಾದ ಅವಘಡಗಳು ತಪ್ಪಿದಂತಾಗಿದೆ.

ಕಳೆದ 24 ಗಂಟೆಗಳಲ್ಲಿ ಜೂನ್‌ನಲ್ಲಿ ಸಾಮಾನ್ಯವಾಗಿ ನಿರೀಕ್ಷಿಸುವುದಕ್ಕಿಂತ ಎರಡು ಪಟ್ಟು ಹೆಚ್ಚು ಮಳೆ ಸುರಿದಿದೆ ಎಂದು ಪ್ರವಾಹ ಪೀಡಿತ ನಗರಗಳ ಮೇಯರ್​ಗಳು ಹೇಳಿದ್ದಾರೆ. ಮ್ಯಾಕ್ವಿನ್‌ನ ಮೇಯರ್ ತಮ್ಮ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ನಗರದಲ್ಲಿ ಒಂದು ದಿನದಲ್ಲಿ 29.4 ಸೆಂಟಿಮೀಟರ್‌ಗಳಿಗಿಂತ (ಸುಮಾರು 11 ಇಂಚುಗಳು) ಹೆಚ್ಚು ಮಳೆ ಸುರಿದಿದೆ ಎಂದು ಮಾಹಿತಿ ನೀಡಿದರು.

ಚಂಡಮಾರುತವು ಉಷ್ಣವಲಯದ ಚಂಡಮಾರುತವಾಗಿದೆ. ಇದು ಉಷ್ಣವಲಯಕ್ಕಿಂತ ಹೆಚ್ಚಾಗಿ ಮಧ್ಯಮ ಮತ್ತು ಹೆಚ್ಚಿನ ಅಕ್ಷಾಂಶಗಳಲ್ಲಿ ಹೆಚ್ಚಾಗಿ ಸಂಭವಿಸುವ ಹವಾಮಾನ ವ್ಯವಸ್ಥೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇನ್ನು ಈ ಚಳಿಗಾಲದ ಚಂಡಮಾರುತದಿಂದಾಗಿ ಸಾವೊ ಲಿಯೋಪೋಲ್ಡೊ ನಗರ ಸೇರಿದಂತೆ ಅನೇಕ ನಗರಗಳಲ್ಲಿ ಹಾನಿ ಸಂಭವಿಸಿದೆ. ಮರಗಳು ರಸ್ತೆಗೆ ಉರುಳಿ ಬಿದ್ದಿವೆ.

ವಿದ್ಯುತ್​ ಕಂಬಗಳು ಧರೆಗುರುಳಿ ಬಿದ್ದಿದ್ದು, ಅನೇಕ ನಗರಗಳಿಗೆ ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ. ಜನರು ಭಯಭೀತರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಲ್ಲಿನ ಸರ್ಕಾರ ಕಾಣೆಯಾದವರ ಬಗ್ಗೆ ಮತ್ತು ಪೀಡಿತ ನಗರದಲ್ಲಿ ಸಂಕಷ್ಟ ಅನುಭವಿಸುತ್ತಿರುವುದರ ಬಗ್ಗೆ ಕಾಳಜಿ ವಹಿಸಿದೆ. ಮತ್ತು ಸಂಕಷ್ಟಕ್ಕೆ ಸಿಲುಕಿರುವವರನ್ನು ರಕ್ಷಿಸಿ ಸುರುಕ್ಷಿತ ಸ್ಥಳದಲ್ಲಿ ಆಶ್ರಯ ಕಲ್ಪಿಸಿಕೊಡುತ್ತಿದೆ. ಒಟ್ನಲ್ಲಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ಓದಿ:Cyclone Biparjoy: ಚಂಡಮಾರುತಕ್ಕೆ ನಲುಗಿದ ಗುಜರಾತ್​..300 ಕಂಬಗಳು ನಾಶ, 900 ಗ್ರಾಮಗಳಿಗೆ ವಿದ್ಯುತ್​ ಕಟ್​

ABOUT THE AUTHOR

...view details