ಹ್ರೋಜಾ (ಉಕ್ರೇನ್):ರಷ್ಯಾ ಕ್ಷಿಪಣಿ ದಾಳಿ ನಡೆಸಿ ಉಕ್ರೇನ್ನ ಖಾರ್ಕಿವ್ನಲ್ಲಿ 51 ಜನರನ್ನು ಕೊಂದು ಹಾಕಿದೆ. ಇದು ರಷ್ಯಾ ದಾಳಿಯು 'ಕುರುಡು ಮುಷ್ಕರವಲ್ಲ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ಹೇಳಿದ್ದಾರೆ. ಖಾರ್ಕಿವ್ ಪ್ರದೇಶದ ಹಳ್ಳಿಯೊಂದರಲ್ಲಿ ಸಾಮಾನ್ಯ ಅಂಗಡಿ ಮತ್ತು ಕೆಫೆಯ ಮೇಲೆ ಉದ್ದೇಶಪೂರ್ವಕ ಕ್ಷಿಪಣಿ ದಾಳಿ ನಡೆಸಲಾಗಿದೆ" ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಝೆಲೆನ್ಸ್ಕಿ ಅವರು ಪಶ್ಚಿಮ ರಾಷ್ಟ್ರಗಳ ಹೆಚ್ಚಿನ ಬೆಂಬಲ ನೀಡುವಂತೆ ಕೋರಿದ್ದಾರೆ.
''ಈ ತಿಂಗಳ ವೇಳೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಹ್ರೋಜಾ ಗ್ರಾಮದ ಏಕೈಕ ಕೆಫೆಯ ಅವಶೇಷಗಳಲ್ಲಿ ಸಿಲುಕಿ ಬದುಕುಳಿದವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ರಷ್ಯಾದ ಕ್ಷಿಪಣಿ ದಾಳಿಯಿಂದಾಗಿ ಮಕ್ಕಳ ಆಟದ ಮೈದಾನದಲ್ಲಿ ಮೃತ ದೇಹಗಳ ಭಾಗಗಳು ಚಿಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ. ಕ್ಷಿಪಣಿ ಅಪ್ಪಳಿಸಿದಾಗ ಕೆಫೆಯಲ್ಲಿ ಮಕ್ಕಳು ಸೇರಿದಂತೆ ಸುಮಾರು 60 ಮಂದಿ ಇದ್ದರು ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಕೀವ್ನ ಇತರ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿ ಉದ್ದೇಶಪೂರ್ವಕ ಭಯೋತ್ಪಾದನಾ ಕೃತ್ಯ- ಝೆಲೆನ್ಸ್ಕಿ ಖಂಡನೆ:ಮಿತ್ರರಾಷ್ಟ್ರಗಳಿಂದ ಬೆಂಬಲ ಪಡೆಯುವ ಸಲುವಾಗಿ ಸ್ಪೇನ್ನಲ್ಲಿ ನಡೆದ ಸುಮಾರು 50 ಯುರೋಪಿಯನ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ ಝೆಲೆನ್ಸ್ಕಿ, ರಷ್ಯಾ ದಾಳಿಯನ್ನು ಖಂಡಿಸಿದ್ದಾರೆ. ಇದು ರಷ್ಯಾದ ಉದ್ದೇಶಪೂರ್ವಕ ಭಯೋತ್ಪಾದನಾ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.