ಕರ್ನಾಟಕ

karnataka

By

Published : Jul 9, 2023, 9:33 PM IST

ETV Bharat / international

ಆಧುನಿಕ ಗುಲಾಮಗಿರಿ ಪ್ರಕರಣ: ಅಪರಾಧಿ ಮಹಿಳೆಗೆ ಎರಡೂವರೆ ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆ

ಭಾರತೀಯ ಮೂಲದ ತಮಿಳು ಮಹಿಳೆಯನ್ನು ಗುಲಾಮರನ್ನಾಗಿ ಇರಿಸಿಕೊಟ್ಟಿದ್ದಕ್ಕೆ ಮೆಲ್ಬೋರ್ನ್​ ಮಹಿಳೆಯೊಬ್ಬರು ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೇ, ಪ್ರಕರಣದ ತನಿಖೆಗೆ ಸಾಕ್ಷ್ಯ ನೀಡದಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಕ್ಕಾಗಿ ಹೆಚ್ಚುವರಿ ಎರಡೂವರೆ ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ.

ಜೈಲು ಶಿಕ್ಷೆ
ಜೈಲು ಶಿಕ್ಷೆ

ಮೆಲ್ಬೋರ್ನ್: ಎಂಟು ವರ್ಷಗಳ ಕಾಲ ಭಾರತೀಯ ಮೂಲದ ತಮಿಳು ಮಹಿಳೆಯನ್ನು ಗುಲಾಮಳನ್ನಾಗಿ ಇಟ್ಟುಕೊಂಡಿದ್ದಕ್ಕಾಗಿ ಮೆಲ್ಬೋರ್ನ್ ಮಹಿಳೆಯೊಬ್ಬರು (55 ವರ್ಷ) ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಕ್ರಿಮಿನಲ್ ಪ್ರಕರಣದ ತನಿಖೆಗೆ ಸಾಕ್ಷ್ಯ ನೀಡುವ ಮೊದಲು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಕ್ಕಾಗಿ ಹೆಚ್ಚುವರಿ ಎರಡೂವರೆ ವರ್ಷಗಳ ಶಿಕ್ಷೆ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕುಮುದಿನಿ ಕಣ್ಣನ್ ಮತ್ತು ಅವರ ಪತಿ ಕಂದಸಾಮಿ ಕಣ್ಣನ್ ಅವರು 2007 ಮತ್ತು 2015 ರ ನಡುವೆ ತಮ್ಮ ಮೌಂಟ್ ವೇವರ್ಲಿ ಮನೆಯಲ್ಲಿ 60 ರ ಹರೆಯದ ಸಂತ್ರಸ್ತೆಯನ್ನು ಗುಲಾಮರನ್ನಾಗಿ ಇಟ್ಟುಕೊಂಡಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ಪೊಲೀಸರು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥ ಪನ್ನು ಸಾವಿನ ವದಂತಿ: ಭಯೋತ್ಪಾದನೆ ವಿರುದ್ಧ ಯಾವಾಗಲೂ ಕಠಿಣ ಕ್ರಮ ಎಂದ ಕೆನಡಾ ಪ್ರಧಾನಿ

ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ (AFP) ಗುಲಾಮಗಿರಿಯ ತನಿಖೆಯ ಸಂದರ್ಭದಲ್ಲಿ ನ್ಯಾಯದ ಹಾದಿಯನ್ನು ವಿರೂಪಗೊಳಿಸಿರುವ ಅಪರಾಧವನ್ನು ಕುಮುದಿನಿ ಒಪ್ಪಿಕೊಂಡಿದ್ದಾರೆ ಮತ್ತು ಹೀಗಾಗಿ, ಜುಲೈ 7 ರಂದು ವಿಕ್ಟೋರಿಯಾದ ಕೌಂಟಿ ಕೋರ್ಟ್‌ನಲ್ಲಿ ಹೆಚ್ಚುವರಿ ಎರಡು ವರ್ಷ ಮತ್ತು ಆರು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಬಿಸಿಲನಾಡಲ್ಲಿ ಇನ್ನೂ ಬದುಕುಳಿದಿದೆ ಜೀತ ಪದ್ಧತಿ: ಗೊತ್ತಿದ್ರೂ ಗೊತ್ತಿಲ್ಲದಂತಿರುವ ಅಧಿಕಾರಿಗಳು?

ಸಂತ್ರಸ್ತೆಯನ್ನು ಗುಲಾಮರನ್ನಾಗಿ ಇರಿಸಿಕೊಂಡ ದಂಪತಿ: ಅವರು ಜನವರಿ 2026ರಲ್ಲಿ ಪೆರೋಲ್‌ಗೆ ಅರ್ಹರಾಗುತ್ತಾರೆ. ಆಕೆಯ ಪತಿಗೆ ಮೂರು ವರ್ಷಗಳ ಪೆರೋಲ್ ರಹಿತ ಅವಧಿಯೊಂದಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ದಂಪತಿ ಸಂತ್ರಸ್ತೆಯನ್ನು ಗುಲಾಮರನ್ನಾಗಿ ಇರಿಸಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯು ದೃಢಪಡಿಸಿದ ನಂತರ 2021 ರಲ್ಲಿ 8 ವರ್ಷಗಳವರೆಗೆ ಅವರನ್ನು ಜೈಲಿಗೆ ಹಾಕಲಾಯಿತು.

ಸಾಕ್ಷ್ಯವನ್ನು ನೀಡದಂತೆ ಸಂತ್ರಸ್ತೆಗೆ ಬೆದರಿಕೆ:ಫೆಡರಲ್ ಪೊಲೀಸ್ ಜೂನ್ 2016ರಲ್ಲಿ ದಂಪತಿಯ ಮೇಲೆ ಗುಲಾಮಗಿರಿಯ ಅಪರಾಧದಡಿ ಪ್ರಕರಣ ದಾಖಲಾಗಿತ್ತು. ಮತ್ತು 2020 ರಲ್ಲಿ ವಿಚಾರಣೆಗಾಗಿ ಕಾಯುತ್ತಿರುವಾಗ ಕುಮುದಿನಿ ಸಂತ್ರಸ್ತೆಗೆ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಸಾಕ್ಷ್ಯವನ್ನು ನೀಡದಂತೆ ಬೆದರಿಕೆ ಹಾಕಿದ್ದರು.

ಇದನ್ನೂ ಓದಿ:ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 40 ಮಕ್ಕಳು ಸೇರಿ 204 ಮಂದಿ ರಕ್ಷಣೆ

ನ್ಯಾಯದ ಹಾದಿಯನ್ನು ವಿರೂಪಗೊಳಿಸುವ ಪ್ರಯತ್ನ: ಫೆಬ್ರವರಿ 2020 ರಲ್ಲಿ AFP ಮಾನವ ಕಳ್ಳಸಾಗಣೆ ತಂಡವು 1914 ರ ಅಪರಾಧ ಕಾಯ್ದೆಯಡಿ ವ್ಯತಿರಿಕ್ತವಾಗಿ ನ್ಯಾಯದ ಹಾದಿಯನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಹಿಳೆಯ ಮೇಲೆ ಆರೋಪ ಹೊರಿಸಿತ್ತು ಮತ್ತು ಗುಲಾಮಗಿರಿ ಪ್ರಕ್ರಿಯೆಗಳಿಂದ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿತ್ತು.

ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ, ಮಹಿಳೆಯ ಕುಟುಂಬ ಭಾರತದಲ್ಲಿದ್ದು, ಆಕೆಗೆ ಇಂಗ್ಲಿಷ್ ಬಾರದ ಕಾರಣ, ಆಕೆಯ ಪಾಸ್​ಪೋರ್ಟ್ ಅನ್ನು ಕಿತ್ತುಕೊಂಡು ಹೋಗಿದ್ದರಿಂದ ವೃದ್ಧೆಯ ಮೇಲೆ ಶೋಷಣೆ ನಡೆಸಿದ್ದರು.

ಇದನ್ನೂ ಓದಿ:ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನ.. ಇಲ್ಲಿವೆ ಆಧುನಿಕ ಗುಲಾಮಗಿರಿಯ ರೂಪಗಳು..

ABOUT THE AUTHOR

...view details