ಕರ್ನಾಟಕ

karnataka

By PTI

Published : Oct 2, 2023, 9:45 AM IST

Updated : Oct 2, 2023, 9:59 AM IST

ETV Bharat / international

ಚರ್ಚ್​ ಕುಸಿತ: 9 ಸಾವು, ಅವಶೇಷಗಳಡಿ ಸಿಲುಕಿದ 30 ಮಂದಿ.. 50ಕ್ಕೂ ಹೆಚ್ಚು ಜನರಿಗೆ ಗಾಯ

ಉತ್ತರ ಮೆಕ್ಸಿಕೋದಲ್ಲಿ ಚರ್ಚ್​ ಕುಸಿದು ಬಿದ್ದು 9 ಜನ ಮೃತಪಟ್ಟಿದ್ದಾರೆ. 50 ಜನರನ್ನು ಹೊರತರಲಾಗಿದೆ, ಹಾಗೇ ಇನ್ನು 30 ಜನ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಚರ್ಚ್​ ಕುಸಿತ
ಚರ್ಚ್​ ಕುಸಿತ

ಸಿಯುಡಾಡ್ ಮಡೆರೊ(ಮೆಕ್ಸಿಕೋ ಸಿಟಿ):ಉತ್ತರ ಮೆಕ್ಸಿಕೊದಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಚರ್ಚ್‌ನ ಛಾವಣಿ ಕುಸಿದು ಒಂಬತ್ತು ಜನರು ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ಛಾವಣಿ ಕುಸಿಯುವ ವೇಳೆ ಸುಮಾರು 30 ಮಂದಿ ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಬದುಕುಳಿದಿರುವವರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಚರ್ಚ್​ ಕುಸಿಯುವ ಸಂದರ್ಭ ಸುಮಾರು 100 ಜನರು ಚರ್ಚ್‌ನೊಳಗಿದ್ದರು ಎಂದು ತಮೌಲಿಪಾಸ್ ರಾಜ್ಯ ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ರಾಜ್ಯ ಭದ್ರತಾ ವಕ್ತಾರರ ಕಚೇರಿ ತಡವಾಗಿ ಒಂಬತ್ತು ಜನರು ಕುಸಿತದಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದು, ಘಟನೆಗೆ ಚರ್ಚ್​ನ ರಚನಾತ್ಮಕ ವೈಫಲ್ಯದಿಂದ ಉಂಟಾಗಿರಬಹುದು ಎಂದು ವಿವರಿಸಿದೆ.

ರಾಷ್ಟ್ರೀಯ ಗಾರ್ಡ್, ರಾಜ್ಯ ಪೊಲೀಸ್ ಮತ್ತು ರಾಜ್ಯ ನಾಗರಿಕ ರಕ್ಷಣಾ ಕಚೇರಿ ಮತ್ತು ರೆಡ್‌ಕ್ರಾಸ್‌ನ ಘಟಕಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಟ್ಯಾಂಪಿಕೊದ ರೋಮನ್ ಕ್ಯಾಥೋಲಿಕ್ ಡಯಾಸಿಸ್‌ನ ಬಿಷಪ್ ಜೋಸ್-ಅರ್ಮಾಂಡೋ ಅಲ್ವಾರೆಜ್ ಅವರು "ಬಂದರು ನಗರವಾದ ಟ್ಯಾಂಪಿಕೊದ ಪಕ್ಕದಲ್ಲಿರುವ ಗಲ್ಫ್ ಕರಾವಳಿ ನಗರವಾದ ಸಿಯುಡಾಡ್ ಮಡೆರೊದಲ್ಲಿನ ಸಾಂಟಾ ಕ್ರೂಜ್ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಛಾವಣಿ ಕುಸಿದಿದೆ" ಎಂದು ಹೇಳಿದ್ದಾರೆ.

ಕುಸಿತದ ಪರಿಣಾಮ ಆಸ್ಪತ್ರೆಗೆ ದಾಖಲಾಗಿರುವ ಸುಮಾರು 50 ಗಾಯಾಳುಗಳ ವಿವರವನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ 4 ತಿಂಗಳ ಮಗು, 5 ವರ್ಷದ ಮೂವರು ಮಕ್ಕಳು ಮತ್ತು 9 ವರ್ಷದ ಇಬ್ಬರು ಮಕ್ಕಳು ಕೂಡಾ ಸೇರಿದ್ದಾರೆ. ಆದರೆ, ಅವರ ಆರೋಗ್ಯದ ಕುರಿತು ತಕ್ಷಣದ ಮಾಹಿತಿ ಲಭ್ಯವಿಲ್ಲ. ಹಾಗೆ ದೈವಿಕ ಪ್ರಾವಿಡೆನ್ಸ್ ಮತ್ತು ರಕ್ಷಣಾ ತಂಡಗಳ ಕಾರ್ಯಕ್ಕೆ ಧನ್ಯವಾದಗಳು. ಅವಶೇಷಗಳ ಕೆಳಗೆ ಸಿಲುಕಿದ್ದ ಜನರನ್ನು ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಅಲ್ವಾರೆಜ್ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಬರೆದಿದ್ದಾರೆ.

ಕುಸಿತದಿಂದ ಛಾವಣಿಯ ಭಾಗಗಳು ಬಹುತೇಕ ನೆಲಕ್ಕೆ ಅಪ್ಳಳಿಸಿವೆ. ಆದರೆ, ಗೋಡೆಗಳು ಹೊರಕ್ಕೆ ಬಿದ್ದಿಲ್ಲ, ಜತೆಗೆ ಸ್ಫೋಟದ ಯಾವುದೇ ಸೂಚನೆ ಇಲ್ಲ.ಕಟ್ಟಡದ ರಚನಾತ್ಮಕ ವೈಫಲ್ಯವನ್ನು ಹೊರತುಪಡಿಸಿ ಬೇರೆ ಮೇಲ್ನೋಟಕ್ಕೆ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಮೇಲ್ಛಾವಣಿಯು ತುಲನಾತ್ಮಕವಾಗಿ ತೆಳುವಾಗಿ ಸುರಿದ ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿದೆ.

ಸದ್ಯಕ್ಕೆ ಸಿಲುಕಿರುವ ಜನರನ್ನು ಹೊರ ತಂದ ಬಳಿಕ ಕುಸಿದಿರುವ ಛಾವಣಿಯ ಭಾಗಗಳನ್ನು ಕ್ರೇನ್‌ನ ಸಹಾಯದಿಂದ ಎತ್ತುವ ಪ್ರಯತ್ನಗಳನ್ನು ಮಾಡುವ ಸಾಧ್ಯತೆ ಇದೆ. ಬದುಕುಳಿದವರನ್ನು ಪತ್ತೆಹಚ್ಚಲು ವಿಶೇಷ ತರಬೇತಿ ಪಡೆದ ಶ್ವಾನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ:ಟ್ರಕ್​ ಅಪಘಾತ 10 ಕ್ಯೂಬಾ ವಲಸಿಗರ ಸಾವು..17 ಮಂದಿಗೆ ಗಂಭೀರ ಗಾಯ

Last Updated : Oct 2, 2023, 9:59 AM IST

ABOUT THE AUTHOR

...view details