ಕರ್ನಾಟಕ

karnataka

ಕುಡುಕ ಚಾಲಕನಿಂದ ಆರತಕ್ಷತೆ ಮುಗಿಸಿ ಬರುತ್ತಿದ್ದ ವಧು ಸಾವು.. ವರನಿಗೆ ಗಂಭೀರ ಗಾಯ

By

Published : May 2, 2023, 7:46 PM IST

ಅಮೆರಿಕದ ದಕ್ಷಿಣ ಕೆರೊಲಿನ್​ನಲ್ಲಿ ಆರತಕ್ಷತೆ ಮುಗಿಸಿಕೊಂಡು ಹೊರಟಿದ್ದ ನವವಿವಾಹಿತ ವಾಹನಕ್ಕೆ ಕುಡಕ ಚಾಲಕ ಡಿಕ್ಕಿ ಹೊಡೆದು ವಧು ಸಾವನ್ನಪ್ಪಿರುವ ದುರಂತ ನಡೆದಿದೆ.

bride-killed-groom-seriously-hurt-by-drunk-driver-just-minutes-after-leaving-wedding-reception-cops
ಕುಡುಕ ಚಾಲಕನಿಂದ ಆರತಕ್ಷತೆ ಮುಗಿಸಿ ಬರುತ್ತಿದ್ದ ವಧು ಸಾವು, ವರನಿಗೆ ಗಂಭೀರ ಗಾಯ

ದಕ್ಷಿಣ ಕೆರೊಲಿನ್​​ (ಅಮೆರಿಕ):ನವ ವಿವಾಹಿತ ದಂಪತಿ ತಮ್ಮ ಆರತಕ್ಷತೆ ಮುಗಿಸಿಕೊಂಡು ಗಾಲ್ಫ್​ ಕಾರ್ಟ್​ ವಾಹನದಲ್ಲಿ ಹೊರಡುತ್ತಿರುವಾಗ ಕುಡುಕ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಧು ಸಾವನ್ನಪ್ಪಿರುವ ಘಟನೆ ಅಮೆರಿಕದ ದಕ್ಷಿಣ ಕೆರೊಲಿನಾದಲ್ಲಿ ಸಂಭವಿಸಿದೆ. ವರ ಆರಿಕ್​ ಹಚಿನ್ಸನ್​​ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ವಧುವನ್ನು ಸಮಂತಾ (34) ಎಂದು ಗುರುತಿಸಲಾಗಿದೆ. ಈ ದುರಂತ ಘಟನೆಯ ಬಗ್ಗೆ ಗೋ ಫಂಡ್​ ಮಿ (goFundMe) ಪುಟದ ಮೂಲಕ ವರನ ತಾಯಿ ನವದಂಪತಿಯ ಫೋಟೋವನ್ನು ಪೋಸ್ಟ್​​ ಮಾಡಿ ಘಟನೆಯ ಬಗ್ಗೆ ವಿವರವನ್ನು ನೀಡಿ ಚಿಕಿತ್ಸೆಗೆ ಹಣದ ಸಹಾಯವನ್ನು ಕೇಳಿದ್ದಾರೆ. ಪುಟದಲ್ಲಿ ಉಲ್ಲೇಖಿಸಿರುವ ಪ್ರಕಾರ, "ನವದಂಪತಿ ತಮ್ಮ ಆರತಕ್ಷತೆಯ ಕಾರ್ಯಕ್ರಮವನ್ನು ಮುಗಿಸಿಕೊಂಡು ಗಾಲ್ಫ್​​ ಕಾರ್ಟ್​ ವಾಹನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಕುಡಿದು ಗಾಡಿ ಓಡಿಸಿಕೊಂಡು ಬರುತ್ತಿದ್ದ ವ್ಯಕ್ತಿ ಹಿಂದಿನಿಂದ ಬಂದು ನವವಿವಾಹಿತರಿದ್ದ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ. ಇದರ ಪರಣಾಮ ಸ್ಥಳದಲ್ಲೇ ವಧು ಸಾವನ್ನಪ್ಪಿದ್ದಾಳೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ದಂಪತಿಗಳಿದ್ದ ವಾಹನವು ಸ್ವಲ್ಪ ದೂರ ಉರುಳುತ್ತ ಹೋಗಿದೆ'' ಎಂದು ಹೇಳಿದ್ದಾರೆ.

ವರನ ತಲೆಗೆ ಪೆಟ್ಟು ಬಿದ್ದಿದೆ ಮತ್ತು ಹಲವಾರು ಮೂಳೆಗಳು ಮುರಿದಿವೆ. ವರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಇದಕ್ಕೆ ಸಾಕಷ್ಟು ಹಣ ಬೇಕಾಗಿದ್ದು, ಗೋ ಫಂಡ್​​ ಮಿ ಪುಟದ ಮೂಲಕ ವರನ ತಾಯಿ ಸಹಾಯದ ಹಸ್ತವನ್ನು ಚಾಚಿದ್ದಾರೆ. ಈ ಘಟನೆಯಲ್ಲಿ ದಂಪತಿಯ ಜೊತೆ ಇದ್ದ ಸ್ನೇಹಿತರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ:ಆಪರೇಷನ್ ಕಾವೇರಿ ಅಡಿ ಜೆಡ್ಡಾಗೆ ತಲುಪಿದ 8ನೇ ಬ್ಯಾಚ್​, ಸುಡಾನ್​ನಲ್ಲಿ ಮತ್ತೆ ಕದನ ವಿರಾಮ ಘೋಷಣೆ

ಸದ್ದು ಮಾಡಬೇಡಿ ಎಂದಿದ್ದಕ್ಕೆ ನೆರೆಮನೆಯವರನ್ನೇ ಕೊಂದ ದುರುಳ:ಅಮೆರಿಕದಲ್ಲಿ ಬಂದೂಕು ಹೊಂದಿರುವುದರ ಮೇಲೆ ನಿರ್ಬಂಧ ಹೇರುವ ವಿಚಾರ ಮುನ್ನೆಲೆಗೆ ಬಂದ ನಡುವೆಯೂ, ಅದರ ಮೊರೆತ ಮಾತ್ರ ನಿಂತಿಲ್ಲ. ಮಗು ನಿದ್ದೆ ಮಾಡುತ್ತಿದೆ ಗುಂಡು ಹಾರಿಸಬೇಡ ಎಂದು ಹೇಳಿದ ನೆರೆಮನೆಯವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ ವಿಚಿತ್ರ ಘಟನೆ ಇತ್ತೀಚೆಗೆ ನಡೆದಿತ್ತು.

ಟೆಕ್ಸಾಸ್‌ನ ಕ್ಲೀವ್‌ಲ್ಯಾಂಡ್‌ನಲ್ಲಿ ದುರಂತ ನಡೆದಿದ್ದು, 8 ವರ್ಷದ ಮಗು ಸೇರಿದಂತೆ 5 ಮಂದಿ ಬಲಿಯಾಗಿದ್ದರು. ಬಂದೂಕುಧಾರಿಯೊಬ್ಬ ವಿನಾಕಾರಣ ಗುಂಡು ಹಾರಿಸುತ್ತಿದ್ದ. ನೆರೆಹೊರೆಯವರು ಹೀಗೆ ಮಾಡಬೇಡ. ಮಗು ಮನೆಯಲ್ಲಿ ಮಲಗಿದೆ. ಅದಕ್ಕೆ ನಿದ್ರಾಭಂಗವಾಗುತ್ತದೆ ಎಂದು ಬುದ್ಧಿವಾದ ಹೇಳಿದ್ದರು. ಇಷ್ಟಕ್ಕೇ ಸಿಟ್ಟಾದ ಆ ವ್ಯಕ್ತಿ ಮನೆಯವರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದ. ಶನಿವಾರ ಸ್ಥಳೀಯ ಕಾಲಮಾನ ಸುಮಾರು 11:30 ಗಂಟೆಗೆ ಈ ಶೂಟೌಟ್​ ನಡೆದಿದೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ 8 ವರ್ಷದ ಮಗು ಮತ್ತು ನಾಲ್ವರಿಗೆ ಗುಂಡಿಕ್ಕಿ ಕೊಂದಿದ್ದ.

ಇದನ್ನೂ ಓದಿ:ಸುಡಾನ್​ನಿಂದ ಭಾರತೀಯರ ಸ್ಥಳಾಂತರ: 362 ಜನರ ಹೊತ್ತ ವಿಮಾನ ಜೆಡ್ಡಾದಿಂದ ಬೆಂಗಳೂರಿಗೆ ಪಯಣ

ABOUT THE AUTHOR

...view details