ಕರ್ನಾಟಕ

karnataka

By

Published : Nov 29, 2020, 5:58 AM IST

ETV Bharat / international

ನವೆಂಬರ್ 29 :ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನ ಮತ್ತು ಪ್ಯಾಲೇಸ್ಟಿನಿಯನ್ ಜನ

ನವೆಂಬರ್ 29 ಅನ್ನು 1978 ರಿಂದ ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನವೆಂದು ಆಚರಿಸಲಾಗುತ್ತದೆ. ಇದೇ ಕಾರಣದಿಂದ 1977 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನವೆಂಬರ್ 29 ಅನ್ನು ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನವೆಂದು ಘೋಷಿಸಲಾಯಿತು. 1967 ರಲ್ಲಿ ಯುದ್ಧದ ನಂತರ, ಇಸ್ರೇಲ್ ಪ್ಯಾಲೇಸ್ಟಿನಿಯನ್ ಭೂಮಿಯನ್ನು ಆಕ್ರಮಿಸಲು ಪ್ರಾರಂಭಿಸಿತು. ಅದು ಇಂದಿಗೂ ಮುಂದುವರೆದಿದೆ.

ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನ
ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನ

ಪ್ಯಾಲೆಸ್ಟೈನ್:ನವೆಂಬರ್ 29 ಅನ್ನು 1978 ರಿಂದ ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನವೆಂದು ಆಚರಿಸಲಾಗುತ್ತದೆ. ಅರಬ್ ರಾಜ್ಯ ಮತ್ತು ಯಹೂದಿ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ವಿಭಜನಾ ಯೋಜನೆ ಎಂದು ಕರೆಯಲ್ಪಟ್ಟಿದೆ. ಇದನ್ನು 29 ನವೆಂಬರ್ 1947 ರಂದು ಅಂಗೀಕರಿಸಲಾಯಿತು. ಇದೇ ಕಾರಣದಿಂದ 1977 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನವೆಂಬರ್ 29 ಅನ್ನು ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನವೆಂದು ಘೋಷಿಸಲಾಯಿತು.

1947 ರ ನವೆಂಬರ್ 29 ರಂದು ಯುಎನ್ ಜನರಲ್ ಅಸೆಂಬ್ಲಿ 181 (II) ನಿರ್ಣಯವನ್ನು ಅಂಗೀಕರಿಸಿತು. ಪ್ಯಾಲೆಸ್ಟೈನ್ ಅನ್ನು ಅರಬ್ ರಾಜ್ಯ ಮತ್ತು ಯಹೂದಿ ರಾಜ್ಯವಾಗಿ ವಿಭಜಿಸಿತು. ಇಸ್ರೇಲ್ ರಾಜ್ಯವನ್ನು 1948 ರಲ್ಲಿ ಸ್ಥಾಪಿಸಲಾಯಿತು. ಆದರೆ, ಅರಬ್ ರಾಜ್ಯವು ಎಂದಿಗೂ ಅಸ್ತಿತ್ವಕ್ಕೆ ಬರಲಿಲ್ಲ. 1967ರಲ್ಲಿ ಯುದ್ಧದ ನಂತರ, ಇಸ್ರೇಲ್ ಪ್ಯಾಲೇಸ್ಟಿನಿಯನ್ ಭೂಮಿಯನ್ನು ಆಕ್ರಮಿಸಲು ಪ್ರಾರಂಭಿಸಿತು. ಅದು ಇಂದಿಗೂ ಮುಂದುವರೆದಿದೆ.

31 ವರ್ಷಗಳಿಂದ (1986 ರಿಂದ) ಯುನೆಸ್ಕೋ ಶಿಕ್ಷಣ, ಸಂಸ್ಕೃತಿ, ವಿಜ್ಞಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಭಿವೃದ್ಧಿಯ ಮೂಲಕ ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನವನ್ನು ಆಚರಿಸುತ್ತಿದೆ. ಈ ಗುರಿಗಳು ಸಂವಾದ ಮತ್ತು ವಿನಿಮಯವನ್ನು ಉತ್ತೇಜಿಸಲು ಯುನೆಸ್ಕೋದ ಎಲ್ಲ ಕ್ರಮಗಳನ್ನು ರೂಪಿಸುತ್ತವೆ. ಎಲ್ಲ ಮಹಿಳೆಯರು ಮತ್ತು ಪುರುಷರ ಮನಸ್ಸಿನಲ್ಲಿ ಶಾಂತಿಯನ್ನು ನಿರ್ಮಿಸಲು ಮತ್ತು ಸಾಮರಸ್ಯ, ಸುರಕ್ಷತೆಯಲ್ಲಿ ಒಟ್ಟಿಗೆ ವಾಸಿಸುವ ಅಡಿಪಾಯವನ್ನು ಪುನಃಸ್ಥಾಪಿಸಲು ಎಲ್ಲ ರೀತಿಯ ಅವಕಾಶ ಒದಗಿಸಿದೆ.

ಯಹೂದಿಗಳು ಮತ್ತು ಅರಬ್ ಮುಸ್ಲಿಮರು ಭೂಮಿಗೆ ತಮ್ಮ ಹಕ್ಕುಗಳನ್ನು ಒಂದೆರಡು ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದರೂ, ಪ್ರಸ್ತುತ ರಾಜಕೀಯ ಸಂಘರ್ಷವು 20 ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾಯಿತು. ಯುರೋಪಿನಲ್ಲಿ ಹತ್ಯಾಕಾಂಡದಿಂದ ಪಲಾಯನ ಮಾಡುವ ಯಹೂದಿಗಳು ಒಟ್ಟೊಮನ್ ಸಾಮ್ರಾಜ್ಯದಲ್ಲಿ ಅರಬ್ ಮತ್ತು ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾಗಿದ್ದ ರಾಷ್ಟ್ರೀಯ ತಾಯ್ನಾಡನ್ನು ಸ್ಥಾಪಿಸಲು ಬಯಸಿದ್ದರು.

ಇದಕ್ಕೆ ಅರಬ್ಬರು ವಿರೋಧಿಸಿದರು. 1917 ರಲ್ಲಿ ಅಂದಿನ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಜೇಮ್ಸ್ ಬಾಲ್ಫೋರ್ ಪ್ಯಾಲೆಸ್ಟೈನ್ ನಲ್ಲಿ ಯಹೂದಿ "ರಾಷ್ಟ್ರೀಯ ಮನೆ" ಗೆ ಬ್ರಿಟನ್​ ಅಧಿಕೃತ ಬೆಂಬಲವನ್ನು ವ್ಯಕ್ತಪಡಿಸಿದರು. ಇದು ಸಂಘರ್ಷದ ಬೀಜ ಬಿತ್ತಲು ದಾರಿಯಾಯಿತು. "ಅಸ್ತಿತ್ವದಲ್ಲಿರುವ ಯಹೂದಿ - ಅಲ್ಲದ ಸಮುದಾಯಗಳ ಹಕ್ಕುಗಳ" ಬಗ್ಗೆ ಕಾಳಜಿಯ ಕೊರತೆಯಿಂದ ಅರಬ್ಬರು ದೀರ್ಘಕಾಲದ ಹಿಂಸಾಚಾರಕ್ಕೆ ಕಾರಣರಾದರು.

ಅರಬ್ ಮತ್ತು ಯಹೂದಿ ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬ್ರಿಟನ್ 1948 ರಲ್ಲಿ ಪ್ಯಾಲೆಸ್ಟೈನ್ ನಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ಹೊಸದಾಗಿ ರಚಿಸಲಾದ ವಿಶ್ವಸಂಸ್ಥೆಗೆ ಸ್ಪರ್ಧಾತ್ಮಕ ಹಕ್ಕುಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಬಿಟ್ಟಿತು. ಪ್ಯಾಲೆಸ್ಟೈನ್ ನಲ್ಲಿ ಸ್ವತಂತ್ರ ಯಹೂದಿ ಮತ್ತು ಅರಬ್ ರಾಜ್ಯಗಳನ್ನು ರಚಿಸುವ ವಿಭಜನಾ ಯೋಜನೆಯನ್ನು ಯುಎನ್ ಮಂಡಿಸಿತು. ಪ್ಯಾಲೆಸ್ಟೈನ್ ನ ಹೆಚ್ಚಿನ ಯಹೂದಿಗಳು ವಿಭಜನೆಯನ್ನು ಒಪ್ಪಿಕೊಂಡರು ಆದರೆ ಹೆಚ್ಚಿನ ಅರಬ್ಬರು ಒಪ್ಪಲಿಲ್ಲ.

For All Latest Updates

ABOUT THE AUTHOR

...view details