ಕರ್ನಾಟಕ

karnataka

By

Published : Mar 7, 2022, 11:46 AM IST

ETV Bharat / international

ರಷ್ಯಾ-ಉಕ್ರೇನ್‌ ಯುದ್ಧದಿಂದ ಗಗನಕ್ಕೇರಿದೆ ಗೋಧಿ ಬೆಲೆ; ಮಧ್ಯಪ್ರಾಚ್ಯ ದೇಶಗಳಲ್ಲಿ ಆಹಾರಕ್ಕೆ ಹಾಹಾಕಾರ...?

ಜಾಗತಿಕ ಗೋಧಿ ರಫ್ತಿನ ಶೇ.30 ರಷ್ಟು ಪಾಲವನ್ನು ರಷ್ಯಾ ಹಾಗೂ ಉಕ್ರೇನ್‌ ಹೊಂದಿವೆ. ಈಜಿಪ್ಟ್, ಲೆಬನಾನ್, ಲಿಬಿಯಾ ಹಾಗೂ ಟರ್ಕಿ ಸರ್ಕಾರಗಳು ಹೆಚ್ಚಿದ ಧಾನ್ಯ ಬೆಲೆಗಳನ್ನು ಪಾವತಿಸಲು ತುಂಬಾ ಕಷ್ಟಪಡಬೇಕಾಗುತ್ತದೆ.

The Middle East will suffer from the grain shortage due to the war in Ukraine
ರಷ್ಯಾ-ಉಕ್ರೇನ್‌ ಯುದ್ಧದಿಂದ ಗೋಧಿ ಬೆಲೆ ಗಗನಕ್ಕೆ; ಮಧ್ಯಪ್ರಾಚ್ಯ ದೇಶಗಳಲ್ಲಿ ಆಹಾರಕ್ಕೆ ಹಾಹಾಕಾರ...?

ನಿಕೋಸಿಯಾ: ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣಕಾರಿ ದಾಳಿ ಮುಂದುವರಿಕೆ ಹಿನ್ನೆಲೆಯಲ್ಲಿ ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ, ತೈಲ ಬೆಲೆ ಗರಿಷ್ಠ ಮಟ್ಟಕ್ಕೆ ಏರಿಕೆಯ ಜೊತೆಗೆ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಗೋಧಿಯ ಕೊರತೆ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಜಾಗತಿಕ ಗೋಧಿ ರಫ್ತಿನ ಶೇ.30 ರಷ್ಟು ಪಾಲವನ್ನು ರಷ್ಯಾ ಹಾಗೂ ಉಕ್ರೇನ್‌ ಹೊಂದಿರುವುದರಿಂದ ಮಧ್ಯಪ್ರಾಚ್ಯದ ಅನೇಕ ದೇಶಗಳು ಧಾನ್ಯದ ಅನಿವಾರ್ಯ ಕೊರತೆಯ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿವೆ.

ರಷ್ಯಾ ಗೋಧಿ ರಫ್ತು ಮಾಡುವ ವಿಶ್ವದ ಅತಿದೊಡ್ಡ ದೇಶವಾಗಿದೆ. ಈ ಪಟ್ಟಿಯಲ್ಲಿ ಉಕ್ರೇನ್ ನಾಲ್ಕನೇ ಸ್ಥಾನದಲ್ಲಿದೆ, ಎರಡೂ ದೇಶಗಳು ಒಟ್ಟಾಗಿ ಶೇ.19 ಜೋಳವನ್ನು ರಫ್ತು ಮಾಡುತ್ತವೆ. ಉಕ್ರೇನ್‌ನಲ್ಲಿನ ಇನ್ನೂ ಹಲವು ವಾರಗಳವರೆಗೆ ಯುದ್ಧ ಮುಂದುವರಿದರೆ, ಉಕ್ರೇನಿಯನ್ನರು ಗೋಧಿ ಪೈರು ನೆಡುವುದಕ್ಕೆ ಅಡ್ಡಿಯಾಗುತ್ತದೆ.

ಪಾಶ್ಚಿಮಾತ್ಯ ದೇಶಗಳು ವಿಧಿಸಲಾದ ನಿರ್ಬಂಧಗಳಿಂದ ರಷ್ಯಾ ತಿರುಗೇಟು ನೀಡುವ ಮೂಲಕ ತನ್ನ ಉತ್ಪನ್ನಗಳ ಮಾರಾಟವನ್ನು ತಡೆಯುತ್ತದೆ. ಪರಿಣಾಮವಾಗಿ, ಧಾನ್ಯದ ಬೆಲೆಗಳು ತೀವ್ರವಾಗಿ ಏರುತ್ತಲೇ ಇರುತ್ತವೆ. ಇದು ಬ್ರೆಡ್, ಹಾಲು, ಮಾಂಸ ಹಾಗೂ ಇತರ ಉತ್ಪನ್ನಗಳ ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗುತ್ತದೆ.

ರಷ್ಯಾ- ಉಕ್ರೇನ್​​​ನಿಂದ ಬಹುತೇಕ ಗೋದಿ ಖರೀದಿಸುವ ಲೆಬನಾನ್​:ಆಹಾರ ಮತ್ತು ಕೃಷಿ ಸಂಸ್ಥೆ-ಎಫ್‌ಎಒ ಬ್ಯಾಲೆನ್ಸ್ ಶೀಟ್‌ನಿಂದ ತೆಗೆದುಕೊಳ್ಳಲಾದ ಮಾಹಿತಿಯ ಪ್ರಕಾರ, ಲೆಬನಾನ್ ತನ್ನ ರಾಷ್ಟ್ರೀಯ ಬಳಕೆಯ ಶೇ. 81ರಷ್ಟು ಗೋಧಿಯನ್ನು ಉಕ್ರೇನ್‌ನಿಂದ ಮತ್ತು ಶೇ.15ರಷ್ಟು ರಷ್ಯಾದಿಂದ ಖರೀದಿಸುತ್ತದೆ.

ಈಜಿಪ್ಟ್ ತಾನು ಸೇವಿಸುವ ಗೋಧಿಯ ಶೇ.60 ರಷ್ಟನ್ನು ರಷ್ಯಾದಿಂದ ಮತ್ತು ಶೇ.25 ರಷ್ಟು ಉಕ್ರೇನ್‌ನಿಂದ ಖರೀದಿಸುತ್ತದೆ. ಟರ್ಕಿಯು ಇದೇ ರೀತಿಯ ಪ್ರಮಾಣವನ್ನು ಹೊಂದಿದೆ. ಶೇ.66ರಷ್ಟು ಗೋಧಿಯನ್ನು ರಷ್ಯಾದಿಂದ, ಶೇ.10ರಷ್ಟು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳುತ್ತದೆ.

ಹಲವಾರು ಮಧ್ಯಪ್ರಾಚ್ಯ ಸರ್ಕಾರಗಳು ಮತ್ತು ವಿಶೇಷವಾಗಿ ಈಜಿಪ್ಟ್, ಲೆಬನಾನ್, ಲಿಬಿಯಾ ಹಾಗೂ ಟರ್ಕಿ ಸರ್ಕಾರಗಳು ಹೆಚ್ಚಿದ ಧಾನ್ಯ ಬೆಲೆಗಳನ್ನು ಪಾವತಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಇದರಿಂದಾಗಿ ಬ್ರೆಡ್‌ಗೆ ಸಬ್ಸಿಡಿಗಳನ್ನು ಕಡಿಮೆ ಮಾಡಲು ಅಥವಾ ರದ್ದುಗೊಳಿಸಲು ಒತ್ತಾಯಿಸಬಹುದು. ಇದು ಹಿಂಸಾತ್ಮಕ, ಜನಪ್ರಿಯ ಪ್ರತಿಭಟನೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ:ಸುಮ್ಮನೇ ಶರಣಾಗಿ.. ಇಲ್ಲ ಸರ್ವನಾಶವಾಗ್ತೀರಿ ಎಂದ ಪುಟಿನ್​.. ಪ್ರಾಣ ಬಿಡ್ತೀವಿ ಹೊರತು ತಲೆಬಾಗಲ್ಲ ಎಂದ ಝೆಲೆನ್ಸ್ಕಿ

ABOUT THE AUTHOR

...view details