ಕರ್ನಾಟಕ

karnataka

By

Published : Feb 25, 2021, 5:03 PM IST

ETV Bharat / international

ಪಿಎನ್​ಬಿಗೆ 13,500 ಕೋಟಿ ರೂ ವಂಚನೆ... ನೀರವ್ ಮೋದಿ ಭಾರತಕ್ಕೆ ಹಸ್ತಾಂತರ ಮಾಡಲು ಆದೇಶ

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರ ವ್ಯಾಪಾರಿ ನೀರವ್‌ ಮೋದಿಯನ್ನ ಭಾರತಕ್ಕೆ ಹಸ್ತಾಂತರ ಮಾಡಬಹುದು ಎಂದು ಲಂಡನ್ ಕೋರ್ಟ್ ಹೇಳಿದೆ.

Nirav Modi
Nirav Modi

ಲಂಡನ್​:ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ₹ 13500 ಕೋಟಿ ವಂಚಿಸಿರುವ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿಯನ್ನ ಭಾರತಕ್ಕೆ ಹಸ್ತಾಂತರ ಮಾಡಲು ಲಂಡನ್​ ಕೋರ್ಟ್​ ಆದೇಶ ನೀಡಿದೆ.

ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ನೀರವ್ ಮೋದಿ ವೆಸ್ಟ್ ಮಿಸಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು. ಲಂಡನ್​ ವೆಸ್ಟ್ ಮಿಸಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ನ ಜಡ್ಜ್​ ಸ್ಯಾಮುವಲ್​ ಗೊಜ್​ ಈ ದೇಶ ನೀಡಿದ್ದು, ಮುಂಬೈನ ಅರ್ಥರ್ ರೋಡ್​ ಜೈಲಿನಲ್ಲಿ ಅವರಿಗೆ ಎಲ್ಲ ರೀತಿಯ ಚಿಕಿತ್ಸೆ ಸಿಗಲಿದೆ ಎಂದಿದ್ದಾರೆ.

ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರ ಮಾಡುವುದು ಮಾನವ ಹಕ್ಕುಗಳಿಗೆ ಅನುಸಾರವಾಗಿದೆ ಎಂದಿರುವ ಅವರು, ಈ ಆದೇಶಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಲು ಅವರಿಗೆ ಹಕ್ಕಿದೆ ಎಂದಿದ್ದಾರೆ. ಜತೆಗೆ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ವಾದವನ್ನ ತಳ್ಳಿ ಹಾಕಿದ್ದಾರೆ.

ABOUT THE AUTHOR

...view details