ಕರ್ನಾಟಕ

karnataka

ಕಾಶ್ಮೀರ ವಿವಾದ; ಭಾರತ - ಪಾಕಿಸ್ತಾನ ಶಾಶ್ವತ ನಿರ್ಣಯ ಕೈಗೊಳ್ಳುವುದು ಅಗತ್ಯ: ಯುಕೆ ಪ್ರತಿಪಾದನೆ

By

Published : Jan 14, 2021, 7:37 AM IST

ಗಡಿ ನಿಯಂತ್ರಣ ರೇಖೆಯ ಎರಡೂ ಬದಿಗಳಲ್ಲಿ ಮಾನವ ಹಕ್ಕುಗಳ ಕಾಳಜಿಗಳಿವೆ. ಕಾಶ್ಮೀರದ ಬಗ್ಗೆ ಭಾರತ ಮತ್ತು ಸರ್ಕಾರದ ನೀತಿ ಸ್ಥಿರವಾಗಿ ಉಳಿದಿದೆ, ಅದು ಬದಲಾಗುವುದಿಲ್ಲ ಎಂದು ಕಾಮನ್​ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಸಚಿವ ನಿಗೆಲ್ ಆಡಮ್ಸ್ ಹೇಳಿದ್ದಾರೆ.

UK
ಸಚಿವ ನಿಗೆಲ್ ಆಡಮ್ಸ್

ಲಂಡನ್:ಕಾಶ್ಮೀರದ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನ ಶಾಶ್ವತವಾದ ರಾಜಕೀಯ ನಿರ್ಣಯ ಕಂಡು ಹಿಡಿಯುವಲ್ಲಿ ವಿಫಲವಾಗಿದೆ ಎಂದು ಯುಕೆ ಸರ್ಕಾರ ಬುಧವಾರ ತನ್ನ ಬದಲಾಗದ ನಿಲುವು ಪುನರುಚ್ಚರಿಸಿದೆ.

ಕಾಶ್ಮೀರದ ರಾಜಕೀಯ ಪರಿಸ್ಥಿತಿ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ಕಾಮನ್​ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಸಚಿವ ನಿಗೆಲ್ ಆಡಮ್ಸ್ , ದ್ವಿಪಕ್ಷೀಯ ವಿಷಯದಲ್ಲಿ ಬ್ರಿಟನ್ ಯಾವುದೇ ಮಧ್ಯಸ್ಥಿಕೆಯ ಪಾತ್ರ ವಹಿಸುವುದಿಲ್ಲ. ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಎರಡೂ ಬದಿಗಳಲ್ಲಿ ಮಾನವ ಹಕ್ಕುಗಳ ಕಾಳಜಿಗಳಿವೆ ಎಂದು ಒಪ್ಪಿಕೊಳ್ಳಲಾಗಿದೆ. ಕಾಶ್ಮೀರದ ಬಗ್ಗೆ ಸರ್ಕಾರದ ನೀತಿ ಸ್ಥಿರವಾಗಿ ಉಳಿದಿದೆ, ಅದು ಬದಲಾಗುವುದಿಲ್ಲ. ಶಿಮ್ಲಾ ಒಪ್ಪಂದದಲ್ಲಿ ತಿಳಿಸಿರುವಂತೆ ಕಾಶ್ಮೀರಿ ಜನರ ಆಶಯಗಳನ್ನು ಗಣನೆಗೆ ತೆಗೆದುಕೊಳ್ಳುವ ಪರಿಸ್ಥಿತಿಗೆ ಶಾಶ್ವತ ರಾಜಕೀಯ ನಿರ್ಣಯ ಕಂಡುಕೊಳ್ಳುವುದು ಭಾರತ ಮತ್ತು ಪಾಕಿಸ್ತಾನಕ್ಕೆ ಸೂಕ್ತ ಎಂದು ನಾವು ನಂಬುತ್ತಲೇ ಇದ್ದೇವೆ ಎಂದು ಆಡಮ್ಸ್ ಹೇಳಿದರು.

ಹೌಸ್ ಆಫ್ ಕಾಮನ್ಸ್‌ನ ವೆಸ್ಟ್​ಮಿನಿಸ್ಟರ್ ಹಾಲ್‌ನಲ್ಲಿ ನಡೆದ ಚರ್ಚೆಯ ಕೊನೆಯಲ್ಲಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಪ್ರದೇಶದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಪ್ರಜಾಪ್ರಭುತ್ವ ಚುನಾವಣೆಗಳ ಬಗ್ಗೆ ಸಚಿವರು ಪ್ರಸ್ತಾಪಿಸಿದರು. ಇದನ್ನು ಲೇಬರ್ ಪಕ್ಷದ ಸಂಸದ ಬ್ಯಾರಿ ಗಾರ್ಡಿನರ್ ಗಮನ ಸೆಳೆದರು. ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರ ಪ್ರಾಂತ್ಯಗಳಾಗಿ ರಚಿಸಲು ಕಾರಣವಾದ 370ನೇ ವಿಧಿ ಹಿಂತೆಗೆದುಕೊಳ್ಳುವ ಬಗ್ಗೆ ವಿರೋಧಿಸಿದ ಪ್ರತಿ ಪಕ್ಷದ ಸಂಸದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ರಕ್ಷಣಾತ್ಮಕ ವಶದಲ್ಲಿದ್ದ ರಾಜಕಾರಣಿಗಳ ಬಿಡುಗಡೆ ಮತ್ತು ಬ್ರಾಡ್‌ಬ್ಯಾಂಡ್ ನಿರ್ಬಂಧಗಳ ವರದಿಗಳನ್ನು ಸ್ವಾಗತಿಸಿದರು. ಕಾಶ್ಮೀರದ ಜನರು ಅಭಿವೃದ್ಧಿ ಹೊಂದಲು ಮತ್ತು ಯಶಸ್ವಿಯಾಗಲು ಅರ್ಹರಾಗಿದ್ದಾರೆ. ಆದ್ದರಿಂದ ಕಾಶ್ಮೀರದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭಾರತ ಸರ್ಕಾರ ಮಾಡಿರುವ ಬದ್ಧತೆಯನ್ನು ನಾವು ಹೆಚ್ಚು ವಿಶಾಲವಾಗಿ ಸ್ವಾಗತಿಸುತ್ತೇವೆ ಮತ್ತು ಅವರ ಯೋಜನೆಗಳ ಹೆಚ್ಚಿನ ವಿವರಗಳನ್ನು ನಾವು ಮುಂದುವರಿಸುತ್ತೇವೆ ಎಂದು ಆಡಮ್ಸ್ ಹೇಳಿದರು.

370 ನೇ ವಿಧಿಯನ್ನು ರದ್ದುಪಡಿಸುವುದು ಆಂತರಿಕ ವಿಷಯ ಎಂದು ಭಾರತೀಯರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿ ತಿಳಿಸಿದೆ. ವಾಸ್ತವ ಒಪ್ಪಿಕೊಳ್ಳಿ ಮತ್ತು ಭಾರತ ವಿರೋಧಿ ಪ್ರಚಾರವನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು.

ABOUT THE AUTHOR

...view details