ಕರ್ನಾಟಕ

karnataka

ಉಗ್ರರ ಮಟ್ಟಹಾಕಿ ಇಲ್ಲವೇ ಪರಿಣಾಮ ಎದುರಿಸಿ: ಪಾಕಿಸ್ತಾನಕ್ಕೆ ಯುರೋಪ್​ನ ನೇರ ಎಚ್ಚರಿಕೆ!

By

Published : Sep 24, 2019, 7:53 PM IST

ಯುರೋಪಿಯನ್​ ಫೌಂಡೇಷನ್​ ಫಾರ್​ ಸೌತ್​ ಏಷ್ಯಾ ಸ್ಟಡಿಸ್​ (ಇಎಫ್​ಎಸ್​ಎಎಸ್​) ಆಯೋಜಿಸಿದ್ದ 'ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಗೆ ಹಣ'ದ ನೆರವು ವಿಷಯದ ಕುರಿತು ತಜ್ಞರು ತಮ್ಮ ಅಧ್ಯಯನದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೇನ್ರಿ ಜಾಕ್ಸನ್​ ಸೊಸೈಟಿಯ ಸಂಶೋಧನಾ ತಜ್ಞ ಪೌಲ್​ ಸ್ಕಾಟ್​ ಅವರ ನೇತೃತ್ವದಲ್ಲಿ, ದಕ್ಷಿಣ ಏಷ್ಯಾದ ಎಷ್ಟು ರಾಷ್ಟ್ರಗಳು ಮುಖ್ಯವಾಗಿ ಪಾಕಿಸ್ತಾನ ಉಗ್ರರಿಗೆ ಹಣದ ನೆರವು ನೀಡಿ ಭಾರತ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲವಾಗಿದೆ. ಪಾಕಿಸ್ತಾನವನ್ನು ಎದುರಿಸಲು ಅದರ ಹಣಕಾಸಿನ ವ್ಯವಹರಗಳನ್ನು ನಿಯಂತ್ರಸಿಬೇಕಿದೆ. ಆದರಿಂದ ಪಾಕ್​ ಅನ್ನು ಬೂದು ಪಟ್ಟಿಯಿಂದ ಕಪ್ಪುಪಟ್ಟಿಗೆ ಸೇರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಅಧ್ಯಯನ ತಂಡ

ಜಿನಿವಾ:ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿನ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿಕೆ ವಿಶೇಷವಾಗಿ ಪಾಕಿಸ್ತಾನ ಕೃಪಾಪೋಷಿತ ಉಗ್ರ ಚಟುವಟಿಕೆಗಳ ಬಗ್ಗೆ ಯುರೋಪಿಯನ್​ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಯುರೋಪಿಯನ್​ ಫೌಂಡೇಷನ್​ ಫಾರ್​ ಸೌತ್​ ಏಷ್ಯಾ ಸ್ಟಡಿಸ್​ (ಇಎಫ್​ಎಸ್​ಎಎಸ್​) ಆಯೋಜಿಸಿದ್ದ 'ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಗೆ ಹಣ'ದ ನೆರವು ವಿಷಯದ ಕುರಿತು ತಜ್ಞರು ತಮ್ಮ ಅಧ್ಯಯನದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೆನ್ರಿ ಜಾಕ್ಸನ್​ ಸೊಸೈಟಿಯ ಸಂಶೋಧನಾ ತಜ್ಞ ಪೌಲ್​ ಸ್ಕಾಟ್​ ಅವರ ನೇತೃತ್ವದಲ್ಲಿ, ದಕ್ಷಿಣ ಏಷ್ಯಾದ ಎಷ್ಟು ರಾಷ್ಟ್ರಗಳು ಮುಖ್ಯವಾಗಿ ಪಾಕಿಸ್ತಾನ ಉಗ್ರರಿಗೆ ಹಣದ ನೆರವು ನೀಡಿ ಭಾರತ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲವಾಗಿದೆ ಎಂಬುದನ್ನು ಅಧ್ಯಯನ ನಡೆಸಿ ತಿಳಿಸಿದೆ.

ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವುದರ ಮೇಲೆ ಹದ್ದಿನ ಕಣ್ಣಿಟ್ಟು ಅದನ್ನು ನಿಯಂತ್ರಿಸುವ ಜಾಗತಿಕ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ (ಎಫ್​ಎಟಿಎಫ್) ಪಾಕಿಸ್ತಾನದ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಸ್ಕಾಟ್​ ಅಸಮಾಧಾನ ಹೊರಹಾಕಿದ್ದಾರೆ.

ಈ ವಿಷಯದಲ್ಲಿ ಪಾಕಿಸ್ತಾನಕ್ಕೆ ನಿಜವಾದ ಸಮಸ್ಯೆಯಿದ್ದು, ಈ ಸವಾಲನ್ನು ಯಾವಾಗಲೂ ಇಮ್ರಾನ್ ಖಾನ್ ಅವರೇ ಎದುರಿಸಬೇಕಾಗಿದೆ. ಇದು ಅಂತಾರಾಷ್ಟ್ರೀಯ ಅಧಿಕಾರಿಗಳಿಗೂ ಕೂಡ ಇದೊಂದು ಪ್ರಶ್ನೆಯಾಗಿಯೇ ಉಳಿದಿದೆ. ಪಾಕಿಸ್ತಾನವನ್ನು ಎದುರಿಸಲು ಅದರ ಹಣಕಾಸಿನ ವ್ಯವಹಾರಗಳನ್ನು ನಿಯಂತ್ರಿಸಬೇಕಿದೆ. ಆದ್ದರಿಂದ ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ಕಪ್ಪುಪಟ್ಟಿಗೆ ಸೇರಿಸುವ ಅಗತ್ಯವಿದೆ ಎಂದರು.

ABOUT THE AUTHOR

...view details