ಲಾಹೋರ್(ಪಾಕಿಸ್ತಾನ):ಇತ್ತೀಚೆಗೆ ಸ್ಥಳೀಯರಿಂದ ದಾಳಿಗೊಳಗಾಗಿ ಧ್ವಂಸವಾಗಿದ್ದ ಹಿಂದೂ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಪಾಕಿಸ್ತಾನ ಸರ್ಕಾರ ಮಾಹಿತಿ ನೀಡಿದೆ.
ಹಿಂದಿನ ವಾರ ಪಂಜಾಬ್ ಪ್ರಾಂತ್ಯದಲ್ಲಿರುವ ರಹೀಮ್ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದಲ್ಲಿರುವ ದೇವಾಲಯದ ಮೇಲೆ ನೂರಾರು ಮಂದಿ ದಾಳಿ ನಡೆಸಿದ್ದರು. ಎಂಟು ವರ್ಷದ ಹಿಂದೂ ಬಾಲಕ ಮುಸ್ಲಿಂ ಸೆಮಿನರಿಯನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಿ ಈ ಘಟನೆ ನಡೆಸಲಾಗಿತ್ತು.
ದೇವಾಲಯಕ್ಕೆ ನುಗ್ಗಿದವರು ಶಸ್ತ್ರಸ್ತ್ರಗಳು, ಮರದ ಬಡಿಗೆಗಳಿಂದ ಅಲ್ಲಿದ್ದ ವಸ್ತುಗಳನ್ನು ಒಡೆದುಹಾಕಿದ್ದರು. ಕೆಲವು ಭಾಗವನ್ನು ಸುಟ್ಟುಹಾಕಿದ್ದರು. ಇದಾದ ನಂತರ ಪೊಲೀಸರು ದೇಗುಲಕ್ಕೆ ಭದ್ರತೆ ನೀಡಿದ್ದರು. ಈಗಾಗಲೇ ಅಲ್ಲಿನ ಪೊಲೀಸರು 90ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಈಗ ಪಾಕ್ ಸರ್ಕಾರವು ದೇವಾಲಯದ ಪುನರ್ನಿಮಾಣ ಮಾಡಿದ್ದು, ಸ್ಥಳೀಯ ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಿದೆ ಎಂದು ರಹೀಮ್ಯಾರ್ ಖಾನ್ ಜಿಲ್ಲಾ ಪೊಲೀಸ್ ಅಧಿಕಾರಿ ಅಸದ್ ಸರ್ಫ್ರಾಜ್ ಸೋಮವಾರ ಪಿಟಿಐಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಪಾಕ್ನಲ್ಲಿ ಮತ್ತೆ ಹಿಂದೂ ದೇಗುಲದ ಮೇಲೆ ದಾಳಿ: ಘಟನೆ ಖಂಡಿಸಿದ ಕೇಂದ್ರ ಸಚಿವ ಶೇಖಾವತ್