ಕರ್ನಾಟಕ

karnataka

ETV Bharat / international

ಮದುವೆಗೆ ಮೀಸಲಿಟ್ಟ ಹಣವನ್ನು ಬಡವರಿಗೆ ನೀಡಿದ ನವ ದಂಪತಿ - ಸರಳವಾಗಿ ತಮ್ಮ ವಿವಾಹ

ಕೊರೊನಾ ವೈರಸ್​​ ಆಗಮನಕ್ಕೂ ಮುನ್ನ ನಿಶ್ಚಯವಾದ ದಿನಾಂಕದಲ್ಲೇ ಮದುವೆಯಾದ ನವಜೋಡಿ, ಮದುವೆಗೆ ಖರ್ಚು ಮಾಡಲು ಇರಿಸಿದ್ದ ಹಣವನ್ನು ಬಡವರಿಗೆ ನೀಡುವ ಮೂಲಕ ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

Sri Lanka newlyweds
ಬಡವರಿಗೆ ದಿನಸಿ ವಿತರಿಸುತ್ತಿರುವ ನವ ದಂಪತಿ

By

Published : May 18, 2020, 10:50 PM IST

ಕೊಲಂಬೊ(ಶ್ರೀಲಂಕ): ಕೊರೊನಾ ವೈರಸ್​​ ತಂದೊಡ್ಡಿದ ಸಂಕಷ್ಟದಿಂದಾಗಿ ಮದುವೆಗೆ ಖರ್ಚು ಮಾಡುವ ಹಣವನ್ನು ನವವಿವಾಹಿತರೊಬ್ಬರು ಬಡವರಿಗೆ ನೀಡಿದ್ದಾರೆ.

ಕೊರೊನಾ ವೈರಸ್​ ವಿಶ್ವವ್ಯಾಪಿ ಹರಡುವ ಮುನ್ನವೇ ದರ್ಶನ ಕುಮಾರ ವಿಜೇನಾರಾಯಣ ಮತ್ತು ಅವರ ಪ್ರೇಯಸಿ ಪವಾನಿ ರಸಂಗ ಅವರ ಮದುವೆ ನಿಶ್ಚಯವಾಗಿತ್ತು. ಆದರೆ ಕರೊನಾ ರೋಗ ಎಲ್ಲೆಡೆ ಹಬ್ಬಿದ ಹಿನ್ನೆಲೆ, ಈ ಮದುವೆಯನ್ನು ಮುಂದೂಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರು. ಆದರೆ ನಿಶ್ಚಯವಾದ ಮದುವೆಯನ್ನು ಮುಂದೂಡಲು ಮನಸ್ಸಿಲ್ಲದ ಈ ಇಬ್ಬರು, ನಿಗದಿಯಾದ ದಿನಾಂಕದಂದು ಸರಳವಾಗಿ ಮದುವೆ ಆಗಿದ್ದಾರೆ.

ಬಡವರಿಗೆ ದಿನಸಿ ವಿತರಿಸುತ್ತಿರುವ ನವ ದಂಪತಿ

ಈ ಮೊದಲು ಮದುವೆಗೆಂದು 250 ಕ್ಕೂ ಹೆಚ್ಚು ಅತಿಥಿಗಳನ್ನು ಕರೆಯಲಾಗಿತ್ತು ಹಾಗೂ ವಿಜೃಂಭಣೆಯಿಂದ ಮದುವೆ ಮಾಡಲು ಸಿದ್ದತೆಗಳನ್ನು ನಡೆಸಲಾಗಿತ್ತು. ಆದರೆ ಕೊರೊನಾ ಲಾಕ್​ಡೌನ್​ನಿಂದಾಗಿ ನವಜೋಡಿಗಳು ಸರಳವಾಗಿ ಕೇಕ್​ ಕತ್ತರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಮೀಸಲಿಟ್ಟ ಹಣವನ್ನೆಲ್ಲಾ ಬಡವರಿಗೆ ನೀಡುವ ಮೂಲಕ ಮದುವೆಯ ಸಾರ್ಥಕತೆಗೆ ಅರ್ಥ ನೀಡಿದ್ದಾರೆ.

For All Latest Updates

ABOUT THE AUTHOR

...view details