ಕರ್ನಾಟಕ

karnataka

ETV Bharat / international

ಮುಂಬೈ-ಸಿಂಗಪೂರ್​ ವಿಮಾನ ತುರ್ತು ಲ್ಯಾಂಡಿಂಗ್‌ :  ಪ್ರಯಾಣಿಕರೆಲ್ಲ ಬದುಕುವ ಆಸೆನೇ ಕೈಬಿಟ್ಟಿದ್ದರು.. - ಬಾಂಬ್​ ಬೆದರಿಕೆ

ಹುಸಿ ಬಾಂಬ್​ ಬೆದರಿಕೆ ಕರೆ ಬಂದ ಕಾರಣ ಮುಂಬೈ-ಸಿಂಗಪೂರ್​ ವಿಮಾನವನ್ನು ತುರ್ತು ಲ್ಯಾಂಡಿಂಗ್​ ಮಾಡಲಾಗಿತ್ತು.. ಆದರೆ, ಅದೊಂದು ಹುಸಿ ಕರೆ ಎಂದು ಗೊತ್ತಾದ ಮೇಲೆ ಮತ್ತೆ ವಿಮಾನ ಟೇಕಾಫ್ ಆಗಿದೆ.

ಬಾಂಬ್​ ಬೆದರಿಕೆ ಕರೆ ಬಂದ ಕಾರಣ ಮುಂಬೈ-ಸಿಂಗಪೂರ್​ ವಿಮಾನವನ್ನು ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ

By

Published : Mar 26, 2019, 11:34 AM IST

Updated : Mar 26, 2019, 11:40 AM IST

ಸಿಂಗಪೂರ್​: ಮುಂಬೈನಿಂದ ಹೊರಟ ಸಿಂಗಪೂರ್​ ಏರ್​ಲೈನ್ಸ್​ (SIA)ನಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಬಂದ ಹಿನ್ನೆಲೆ ಚಾಂಗಿ​ ಏರ್​ಪೋರ್ಟ್​ನಲ್ಲಿ ಇಂದು ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ. ಆನಂತರ ಅದೊಂದು ಹುಸಿ ಬೆದರಿಕೆ ಕರೆ ಎಂದು ತಿಳಿದುಬಂದಿದೆ.

SQ 423 ವಿಮಾನದಲ್ಲಿ ಬಾಂಬ್​ ಇದೆ ಎಂಬ ಸಂದೇಶ ಪೈಲಟ್‌ಗೆ ತಲುಪಿತ್ತು. ಈ ಕಾರಣ ಇಂದು ಬೆಳಗ್ಗೆ 8 ಗಂಟೆಗೆ ಚಾಂಗಿ ಏರ್​ಪೋರ್ಟ್​ನಲ್ಲಿ ವಿಮಾನವನ್ನ ತುರ್ತು ಭೂಸ್ಪರ್ಶ ಮಾಡಲಾಗಿದೆ. ತಕ್ಷಣ ವಿಮಾನದಲ್ಲಿದ್ದ ಪ್ರಯಾಣಿಕರನ್ನ ಕೆಳಗಿಳಿಸಲಾಯಿತು. ಆದರೆ, ಓರ್ವ ಮಹಿಳೆ ಹಾಗೂ ಮಗುವನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ವಿಮಾನದಲ್ಲಿ 263 ಪ್ರಯಾಣಿಕರಿದ್ದರು.

ಈ ವಿಮಾನ ನಿನ್ನೆ ರಾತ್ರಿ 11.35ಕ್ಕೆ ಮುಂಬೈನಿಂದ ಸಿಂಗಪೂರ್​ಗೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆ ಬಂದ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಂಗಪೂರ್​ ಏರ್​ಲೈನ್ಸ್​ನ ವಕ್ತಾರ ಹೇಳಿಕೆ ನೀಡಿದ್ದಾರೆ.ಸದ್ಯಕ್ಕೆ ಹೆಚ್ಚು ಮಾಹಿತಿ ನೀಡಲಾಗದು ಎಂದೂ ಅವರು ಹೇಳಿದ್ದಾರೆ.

Last Updated : Mar 26, 2019, 11:40 AM IST

ABOUT THE AUTHOR

...view details