ಕರ್ನಾಟಕ

karnataka

ETV Bharat / international

ಪ್ರಧಾನಿ ಕೆಪಿ ಶರ್ಮಾ ಓಲಿ ಉಚ್ಚಾಟನೆ.. ಪ್ರತಿಭಟನೆಗೆ ಸಿದ್ಧವಾದ ಎನ್‌ಸಿಪಿಯ ಪ್ರತಿಸ್ಪರ್ಧಿ ಬಣ - ನೇಪಾಳ ಪ್ರಧಾನಿ ಕೆಪಿ ಶರ್ಮಾ

ಜನವರಿ 29ರಂದು ಹುತಾತ್ಮರಿಗೆ ಗೌರವ ಸಲ್ಲಿಸಲು ಸಾರ್ವಜನಿಕ ಸಮಾರಂಭವನ್ನು ಆಯೋಜಿಸಲಾಗುವುದು, ಫೆಬ್ರವರಿ 4ರಂದು ಕಠ್ಮಂಡುವಿನಲ್ಲಿ ಯುವ ರ್ಯಾಲಿ ಮತ್ತು ಫೆಬ್ರವರಿ 8ರಂದು ಪಂಜಿನ ಮೆರವಣಿಗೆ ನಡೆಸಲಾಗುವುದು. ಜನವರಿ 28,29, 30ರಂದು ಬಂಟ್ವಾಲ್, ಪೋಖರಾ ಮತ್ತು ಧಂಗಾಡಿಯಲ್ಲಿ ಸಾಮೂಹಿಕ ಸಭೆ ನಡೆಸಲಿದ್ದೇವೆ..

Protest
ಪ್ರತಿಭಟನಾನಿರತ ಕಾರ್ಯಕರ್ತರು

By

Published : Jan 25, 2021, 9:59 PM IST

ಕಠ್ಮಂಡು(ನೇಪಾಳ): ದೇಶದಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆ ಹಾಗೂ ರಾಜಕೀಯ ಬಿಕ್ಕಟ್ಟುಗಳ ಮಧ್ಯೆ ಪ್ರಧಾನಿ ಕೆಪಿ ಶರ್ಮಾ ಓಲಿ ಅವರನ್ನೇ ಕಮ್ಯುನಿಸ್ಟ್‌ ಪಕ್ಷದಿಂದ ಉಚ್ಛಾಟಿಸಲಾಗಿರುವ ವಿರುದ್ಧ ಆಡಳಿತಾರೂಡ ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ಪ್ರತಿಸ್ಪರ್ಧಿ ಬಣ ಸೋಮವಾರ ತನ್ನ ಮೂರನೇ ಹಂತದ ಪ್ರತಿಭಟನೆಗೆ ಸಿದ್ದಗೊಂಡಿದೆ.

ಅಸಂವಿಧಾನಿಕ ಕ್ರಮವನ್ನು ಹಿಂತೆಗೆದುಕೊಳ್ಳುವವರೆಗೂ ನಾವು ಈ ಆಂದೋಲನವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿಕೆ ನೀಡಿರುವ ಪ್ರತಿಸ್ಪರ್ಧಿ ಬಣ, ಜನವರಿ 26ರಂದು ರ್ಯಾಲಿ ನಡೆಸಲಿದ್ದೇವೆ ಹಾಗೂ ಮೈಟಿಘರ್ ಪ್ರದೇಶದಲ್ಲಿ ಜನವರಿ 26ರಿಂದ ಫೆಬ್ರವರಿ 3ರವರೆಗೆ ಕಠೋರ ಧರಣಿ ನಡೆಸಲಿದ್ದೇವೆ ಎಂದು ತಿಳಿಸಿದೆ.

ಜನವರಿ 29ರಂದು ಹುತಾತ್ಮರಿಗೆ ಗೌರವ ಸಲ್ಲಿಸಲು ಸಾರ್ವಜನಿಕ ಸಮಾರಂಭವನ್ನು ಆಯೋಜಿಸಲಾಗುವುದು, ಫೆಬ್ರವರಿ 4ರಂದು ಕಠ್ಮಂಡುವಿನಲ್ಲಿ ಯುವ ರ್ಯಾಲಿ ಮತ್ತು ಫೆಬ್ರವರಿ 8ರಂದು ಪಂಜಿನ ಮೆರವಣಿಗೆ ನಡೆಸಲಾಗುವುದು. ಜನವರಿ 28,29, 30ರಂದು ಬಂಟ್ವಾಲ್, ಪೋಖರಾ ಮತ್ತು ಧಂಗಾಡಿಯಲ್ಲಿ ಸಾಮೂಹಿಕ ಸಭೆ ನಡೆಸಲಿದ್ದೇವೆ.

ಈ ಎರಡು ವಾರಗಳ ಕಾಲ ನಡೆಯುವ ಆಂದೋಲನದಲ್ಲಿ, ಪಕ್ಷದ ಬಣವು ವಿವಿಧ ವರ್ಗದ ಜನರೊಂದಿಗೆ ಸಂವಾದ ನಡೆಸುತ್ತದೆ ಎಂದು ಎನ್‌ಸಿಪಿಯ ಪ್ರತಿಸ್ಪರ್ಧಿ ಬಣ ತಿಳಿಸಿದೆ.

ABOUT THE AUTHOR

...view details