ಕರ್ನಾಟಕ

karnataka

ETV Bharat / international

ಬಾಂಗ್ಲಾ ಪಿತಾಮಹ ಬಂಗಬಂಧು ಸ್ಮಾರಕಕ್ಕೆ ನಮಿಸಿದ ಪಿಎಂ ಮೋದಿ - ಗೋಪಾಲ್​​ಗಂಜ್​ನಲ್ಲಿರುವ ದಿ. ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಸ್ಮಾರಕ

2020ರ ಸಾಲಿನ 'ಗಾಂಧಿ ಶಾಂತಿ ಪ್ರಶಸ್ತಿ'ಗೆ ಆಯ್ಕೆಯಾಗಿರುವ ದಿ. ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.

PM Modi visits mausoleum of 'Bangabandhu'
ಬಾಂಗ್ಲಾ ಪಿತಾಮಹ ಬಂಗಬಂಧು ಸ್ಮಾರಕಕ್ಕೆ ನಮಿಸಿದ ಪಿಎಂ ಮೋದಿ

By

Published : Mar 27, 2021, 1:32 PM IST

ಗೋಪಾಲ್​​ಗಂಜ್​ (ಬಾಂಗ್ಲಾದೇಶ): ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗೋಪಾಲ್​​ಗಂಜ್​ನಲ್ಲಿರುವ ದಿ. ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ.

ಬಾಂಗ್ಲಾ ಪಿತಾಮಹ ಬಂಗಬಂಧು ಸಮಾಧಿಗೆ ಬಂದ ಪಿಎಂ ಮೋದಿ ಅವರನ್ನು ಬಾಂಗ್ಲಾದೇಶ ಪ್ರಧಾನಿ ಹಾಗೂ ಬಂಗಬಂಧು ಅವರ ಪುತ್ರಿಯಾಗಿರುವ ಶೇಖ್ ಹಸೀನಾ ಬರಮಾಡಿಕೊಂಡರು. ಬಂಗಬಂಧು ಅವರ ಸ್ಮಾರಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗಣ್ಯವ್ಯಕ್ತಿ ಮೋದಿಯಾಗಿದ್ದಾರೆ.

ಬಂಗಬಂಧು ಸ್ಮಾರಕಕ್ಕೆ ಪಿಎಂ ಮೋದಿ ಭೇಟಿ

ಇದಕ್ಕೂ ಮುನ್ನ ಈಶ್ವರಿಪುರದ ಜೆಶೋರೇಶ್ವರಿ ಕಾಳಿ ದೇವಸ್ಥಾನ ಹಾಗೂ ಕಾಶಿಯಾನದಲ್ಲಿರುವ ಒರಕಂಡಿ ದೇಗುಲಕ್ಕೆ ಭೇಟಿ ನೀಡಿದ್ದ ಮೋದಿ ವಿಶೇಷ ಪ್ರಾರ್ಥನೆ-ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: ಕಾಳಿ ದೇಗುಲದಲ್ಲಿ ಮೋದಿ ವಿಶೇಷ ಪೂಜೆ: ಕೋವಿಡ್​ನಿಂದ ಮುಕ್ತಿಗೆ ಪ್ರಾರ್ಥನೆ

ಕೋವಿಡ್​ ಸಾಂಕ್ರಾಮಿಕ ಉಲ್ಬಣಗೊಂಡ ಬಳಿಕ ಪ್ರಧಾನಿ ಮೋದಿ ಅವರ ಮೊದಲ ವಿದೇಶ ಭೇಟಿ ಇದಾಗಿದೆ. ಬಾಂಗ್ಲಾ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಮತ್ತು ಬಂಗಬಂಧು ಅವರ ಜನ್ಮ ಶತಮಾನೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳಲು ಮೋದಿ ಬಾಂಗ್ಲಾದೇಶ ಪ್ರವಾಸದಲ್ಲಿದ್ದಾರೆ.

ಮೊನ್ನೆಯಷ್ಟೇ 2020ರ ಸಾಲಿನ 'ಗಾಂಧಿ ಶಾಂತಿ ಪ್ರಶಸ್ತಿ'ಗೆ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರನ್ನು ಭಾರತ ಸರ್ಕಾರ ಆಯ್ಕೆ ಮಾಡಿತ್ತು.

ABOUT THE AUTHOR

...view details