ಕರ್ನಾಟಕ

karnataka

ETV Bharat / international

ದೆಂಜಿಲ್​​ ಹೇಳಿಕೆ ಕುರಿತು ತಪ್ಪು ಗ್ರಹಿಕೆ... ಪಾಕ್​ನ ಘಫೂರ್​ಗೆ ಮಂಗಳಾರತಿ​ - ವೃತ್ತ ಏರ್​ ಮಾರ್ಷಲ್​ ದೆಂಜಿಲ್​ ಕೀಲರ್

ಭಾರತೀಯ ಸೇನಾಪಡೆಯ ಮಾಜಿ ಏರ್​ ಮಾರ್ಷಲ್​ ದೆಂಜಿಲ್​ ಕೀಲರ್​ ಅವರ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಭಾರತೀಯ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಘಫೂರ್​ ಟ್ವೀಟ್​ ಮಾಡಿದ್ದರು. ಬಾಲಕೋಟ್​ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನತೆ ಕುರಿತು ಕೀಲರ್​ ಮಾತಾಡಿದ್ದಾರೆ ಎಂದು ಘಪೂರ್​ ಬರೆದುಕೊಂಡಿದ್ದರು. ಇದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Asif Ghafoor

By

Published : Jul 29, 2019, 6:31 AM IST

ಇಸ್ಲಾಮಾಬಾದ್(ಪಾಕಿಸ್ತಾನ)​: ಸುಮ್ಮನಿರಲಾರದೆ ತಮ್ಮ ತಪ್ಪು ಗ್ರಹಿಕೆಯಿಂದ ವಿಡಿಯೋವೊಂದು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದ ಪಾಕಿಸ್ತಾನದ ಇಂಟರ್​ ಸರ್ವೀಸ್​ ಪಬ್ಲಿಕ್ ರಿಲೇಷನ್ಸ್​ನ ಡೈರೆಕ್ಟರ್​ ಜನರಲ್​ ಆಸಿಫ್​ ಘಫೂರ್​​ ನೆಟ್ಟಿಗರಿಂದ ಅಪಹಾಸ್ಯಕ್ಕೊಳಗಾಗಿದ್ದಾರೆ.

ಭಾರತೀಯ ಸೇನಾಪಡೆಯ ನಿವೃತ್ತ ಏರ್​ ಮಾರ್ಷಲ್​ ದೆಂಜಿಲ್​ ಕೀಲರ್​ ಅವರ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಭಾರತೀಯ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಘಫೂರ್​ ಟ್ವೀಟ್​ ಮಾಡಿದ್ದರು. ಬಾಲಕೋಟ್​ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನತೆ ಕುರಿತು ಕೀಲರ್​ ಮಾತಾಡಿದ್ದಾರೆ ಎಂದು ಘಪೂರ್​ ಬರೆದುಕೊಂಡಿದ್ದರು. ಪಾಕ್​ ಕಪಿಮುಷ್ಠಿಗೆ ಸಿಲುಕಿದ್ದ ವಿಂಗ್ ಕಮ್ಯಾಂಡರ್​ ಅಭಿನಂದನ್​ರ ವಿಡಿಯೋವನ್ನೂ ಇದಕ್ಕೆ ಜೋಡಿಸಿದ್ದರು.

ಆದರೆ ಕೀಲರ್​ ಇತ್ತೀಚಿನ ಸಂದರ್ಭದ ಬಗ್ಗೆ ಮಾತನಾಡಿಲ್ಲ. ಅವರು 2015ರಲ್ಲಿ ಮಾತನಾಡಿದ್ದ ವಿಡಿಯೋವನ್ನು ತಪ್ಪಾಗಿ ತಿಳಿದ ಘಫೂರ್​ ಇದೀಗ ಪೋಸ್ಟ್​ ಮಾಡಿದ್ದಾರೆ ಎಂದು ನೆಟ್ಟಿಗರು ಕುಟುಕಿದ್ದಾರೆ. ಟ್ವಿಟ್ಟರ್​ ಮೂಲಕವೇ ಜನರು ಘಫೂರ್​ರ ಕಾಲೆಳೆದಿದ್ದಾರೆ. ಇದರಿಂದ ಎಚ್ಚೆತ್ತ ಘಫೂರ್​ ತಕ್ಷಣ ವಿಡಿಯೋವನ್ನು ಡಿಲಿಟ್​ ಮಾಡಿ, ಕ್ಷಮೆ ಸಹ ಯಾಚಿಸಿದ್ದಾರೆ.

ನಿಜವಾಗಿ 2015 ಆಗಸ್ಟ್​ 9ರಂದು ವೈಲ್ಡ್​ಲೈಫ್​ ಫಿಲ್ಮ್ಸ್​ ಇಂಡಿಯಾವು ಕೀಲರ್​ ಸಂದರ್ಶನವನ್ನು 'ನೆಹರೂ ಲಾಸ್ಟ್​ ಇಂಡಿಯಾ ದಿ ವಾರ್​: ಏರ್​ ಮಾರ್ಷಲ್​ ದೆಂಜಿಲ್​ ಕೀಲರ್​ ಸ್ಪೀಕ್ಸ್​ ಅಬೌಟ್​ ಇಂಡಿಯಾಸ್​ ಬ್ಯಾಟಲ್​ ಲಾಸಸ್​' ಎಂಬ ಹೆಸರಿನಲ್ಲಿ ವೆಬ್​ಸೈಟ್​ ಹಾಗೂ ಯೂಟ್ಯೂಬ್​ನಲ್ಲಿ ಪೋಸ್ಟ್​ ಮಾಡಿತ್ತು.

ABOUT THE AUTHOR

...view details