ಕರ್ನಾಟಕ

karnataka

By

Published : May 25, 2020, 1:17 PM IST

ETV Bharat / international

ನಮ್ಮಿಂದ ಕಾಶ್ಮೀರ ಕಸಿದುಕೊಳ್ಳುವುದು ಅಸಾಧ್ಯ: ಈದ್​ ದಿನವೇ ವಿವಾದಕ್ಕೆ ತುಪ್ಪ ಸುರಿದ ಪಾಕ್​ ಸೇನಾಧಿಕಾರಿ

ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನ ಪ್ರಾಯೋಜಿತ ಉಗ್ರರನ್ನು ಹತ್ಯೆ ಮಾಡಿರುವ ಬೆನ್ನಲ್ಲೇ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಲೈನ್ ಆಫ್ ಕಂಟ್ರೋಲ್​ಗೆ ಭೇಟಿ ನೀಡಿದ್ದಾರೆ.

pak
ಪಾಕ್

ಇಸ್ಲಾಮಾಬಾದ್ (ಪಾಕಿಸ್ತಾನ):ಈದ್ ಸಂದರ್ಭದಲ್ಲಿ, ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ, ಪೂನಾ ವಲಯದ ಲೈನ್ ಆಫ್ ಕಂಟ್ರೋಲ್ ಭೇಟಿ ನೀಡಿ ಕಾಶ್ಮೀರವನ್ನು ನಮ್ಮಿಂದ ಕಸಿದುಕೊಳ್ಳುವಂತಿಲ್ಲ ಎಂದಿದ್ದಾರೆ.

ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನ ಪ್ರಾಯೋಜಿತ ಉಗ್ರರನ್ನು ಹತ್ಯೆ ಮಾಡಿರುವ ಬೆನ್ನಲ್ಲೇ ಸೇನಾ ಮುಖ್ಯಸ್ಥ ಈ ಭೇಟಿ ನೀಡಿದ್ದಾರೆ.

ಕಾಶ್ಮೀರವು ವಿವಾದಿತ ಪ್ರದೇಶವಾಗಿದೆ. ಆರ್ಟಿಕಲ್ 370 ಹಿಂತೆಗೆದುಕೊಳ್ಳುವ ಮೂಲಕ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದೆ. ಆ ಮೂಲಕ ಕಾನೂನಾತ್ಮಕವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭೂಭಾಗ ಎಂದು ಸಾಧಿಸುತ್ತಿದೆ ಎಂದರು.

ABOUT THE AUTHOR

...view details