ಕರ್ನಾಟಕ

karnataka

By

Published : Aug 20, 2020, 5:15 PM IST

ETV Bharat / international

ಸುಲೇಮಾನಿ ಹೆಸರಿನಲ್ಲಿ ಹೊಸ ಕ್ಷಿಪಣಿ ಸಿದ್ಧಪಡಿಸಿದ ಇರಾನ್.. ಅಮೆರಿಕಕ್ಕೆ ಎಚ್ಚರಿಕೆ

ಕಳೆದ ಜನವರಿಯಲ್ಲಿ ಬಾಗ್ದಾದ್ ಏರ್​​ಪೋರ್ಟ್​ನಲ್ಲಿ ಅಮೆರಿಕದ ಪಡೆಗಳು​ ನಡಸಿದ ವೈಮಾನಿಕ ದಾಳಿಯಲ್ಲಿ ಹತ್ಯೆಯಾದ ಜನರಲ್‌ ಕಾಸಿಮ್‌ ಸುಲೇಮಾನಿ ಹಾಗೂ ಅಬು ಮಹ್ದಿ ಅಲ್-ಮುಹಂಡಿಸ್ ಅವರ ಹೆಸರಿನಲ್ಲಿ ಇರಾನ್​ ಹೊಸ ಕ್ಷಿಪಣಿಗಳನ್ನು ತಯಾರಿಸಿದೆ.

missiles
ಕ್ಷಿಪಣಿ

ತೆಹ್ರಾನ್​:ಅಮೆರಿಕದೊಂದಿಗಿನ ಸಂದಿಗ್ಧ ಪರಿಸ್ಥಿತಿ ನಡುವೆ ಇರಾನ್​ ಎರಡು ಹೊಸ ಕ್ಷಿಪಣಿಗಳನ್ನು ಸಿದ್ಧಪಡಿಸಿದ್ದು, ಅವುಗಳಿಗೆ ಜನರಲ್‌ ಕಾಸಿಮ್‌ ಸುಲೇಮಾನಿ ಹಾಗೂ ಅಬು ಮಹ್ದಿ ಅಲ್-ಮುಹಂಡಿಸ್ ಅವರ ಹೆಸರಿಟ್ಟಿದೆ.

ರಾಷ್ಟ್ರೀಯ ರಕ್ಷಣಾ ಕೈಗಾರಿಕಾ ದಿನದ ಅಂಗವಾಗಿ ಇರಾನ್‌ನಲ್ಲಿ ಇಂದು 'ಹುತಾತ್ಮ ಹಜ್ ಕಾಸಿಮ್‌' ಹಾಗೂ 'ಹುತಾತ್ಮ ಅಬು ಮಹ್ದಿ' ಎಂಬ ನೌಕಾ ಕ್ರೂಸ್ ಕ್ಷಿಪಣಿ (naval cruise missile)ಗಳನ್ನು ಅನಾವರಣಗೊಳಿಸಲಾಯಿತು.

ಕಳೆದ ಜನವರಿಯಲ್ಲಿ ಬಾಗ್ದಾದ್ ಏರ್​​ಪೋರ್ಟ್​ನಲ್ಲಿ ಅಮೆರಿಕದ ಪಡೆಗಳು​ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾಕ್​ ಹಾಗೂ ಇರಾನ್​ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆಯಾಗಿದ್ದರು. ಘಟನೆಯಲ್ಲಿ ಇರಾಕಿ ಮಿಲಿಟರಿ ಪಡೆಯ (ಪಾಪ್ಯುಲರ್‌​ ಮೊಬಿಲೈಸೇಶನ್​ ಪಡೆ) ಕಮಾಂಡರ್ ಅಬು ಮಹ್ದಿ ಅಲ್-ಮುಹಂಡಿಸ್ ಅವರೂ ಬಲಿಯಾಗಿದ್ದರು. ಇವರ ಗೌರವಾರ್ಥವಾಗಿ ಹಾಗೂ ಅಮೆರಿಕಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಲು ತಮ್ಮ ನಾಯಕರ ಹೆಸರಿನಲ್ಲಿ ಇರಾನ್​ ಕ್ಷಿಪಣಿಗಳನ್ನು ತಯಾರಿಸಿದೆ.

ABOUT THE AUTHOR

...view details