ಕರ್ನಾಟಕ

karnataka

ETV Bharat / international

ಜಕಾರ್ತ : ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್​ ಗುರುತು ಪತ್ತೆ - ಪೈಲಟ್ ಕ್ಯಾಪ್ಟನ್ ಅಫ್ವಾನ್ ಆರ್​​​​​​​ಝಡ್

ರಾಷ್ಟ್ರೀಯ ಶೋಧ ಹಾಗೂ ರಕ್ಷಣಾ ಏಜೆಂನ್ಸಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯೂ ಜನವರಿ 21ರಂದು ಅಂತ್ಯವಾಗಿದ್ದು, ಕೇವಲ ಒಂದು ಬ್ಲ್ಯಾಕ್ ಬಾಕ್ಸ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿತ್ತು..

indonesian-officials-identify-body-of-crashed-planes-pilot
ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್​ ಗುರುತು ಪತ್ತೆ

By

Published : Jan 30, 2021, 4:56 PM IST

ಜಕಾರ್ತ(ಇಂಡೋನೇಷ್ಯಾ) :ಜಕಾರ್ತದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್‌ ಕಡೆಗೆ ಹೊರಟಿದ್ದ ಶ್ರೀವಿಜಯ ವಿಮಾನ ಸಮುದ್ರದಲ್ಲಿ ಪತನವಾಗಿ ತಿಂಗಳ ಬಳಿಕ ವಿಮಾನದಲ್ಲಿದ್ದ ಮತ್ತೆ ಮೂರು ಮೃತದೇಹಗಳ ಗುರುತು ಪತ್ತೆ ಮಾಡಲಾಗಿದೆ. ಇದರಲ್ಲಿ ಪೈಲಟ್ ಕ್ಯಾಪ್ಟನ್ ಅಫ್ವಾನ್ ಆರ್​​​​​​​ಝಡ್​ ಸಹ ಒಬ್ಬರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರಲ್ಲದೆ ಸಹೋದರರ ಮೃತದೇಹವನ್ನು ಇಂಡೋನೇಷ್ಯನ್ ಪೊಲೀಸರು ಗುರುತಿಸಿದ್ದು, ಅವರು ಸುಯಾಂಟೋ ಮತ್ತು ರಿಯಾಂಟೋ ಸಹೋದರರು ಎಂದು ಗುರುತಿಸಲಾಗಿದೆ.

62 ಮಂದಿ ಪ್ರಯಾಣಿಕರಿದ್ದ ಶ್ರೀವಿಜಯ ಏರ್ ಫ್ಲೈಟ್ ಎಸ್‌ಜೆ 182 ಪಶ್ಚಿಮ ಕಾಲಿಮಂಟನ್ ಪ್ರಾಂತ್ಯದ ಪೊಂಟಿಯಾನಕ್ ನಗರಕ್ಕೆ ತಲುಪುವ ಮಾರ್ಗಮಧ್ಯೆ ಪತನವಾಗಿತ್ತು.

ರಾಷ್ಟ್ರೀಯ ಶೋಧ ಹಾಗೂ ರಕ್ಷಣಾ ಏಜೆಂನ್ಸಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯೂ ಜನವರಿ 21ರಂದು ಅಂತ್ಯವಾಗಿದ್ದು, ಕೇವಲ ಒಂದು ಬ್ಲ್ಯಾಕ್ ಬಾಕ್ಸ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಎರಡನೇ ಬ್ಲ್ಯಾಕ್​ ಬಾಕ್ಸ್​ (ಕಾಕ್​​​​ಪಿಟ್ ವಾಯ್ಸ್​ ರೆಕಾರ್ಡರ್​​​​)ನ ಹುಡುಕಾಟದಲ್ಲಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಯು ನಿರತವಾಗಿದೆ.

ಇದನ್ನೂ ಓದಿ:ವುಹಾನ್​​ನ ಮೊದಲ ಕೊರೊನಾ​ ಸೋಂಕಿತ ದಾಖಲಾಗಿದ್ದ ಆಸ್ಪತ್ರೆಗೆ ಡಬ್ಲ್ಯುಹೆಚ್‌ಒ ತಂಡ ಭೇಟಿ

ABOUT THE AUTHOR

...view details