ಕರ್ನಾಟಕ

karnataka

ETV Bharat / international

ದುಬೈನಲ್ಲಿ ಜಸ್ಟ್​​ 2 ಮಾವಿನಹಣ್ಣು ಕದ್ದ ಭಾರತೀಯನಿಗೆ ಏನ್​ ಶಿಕ್ಷೆ ಗೊತ್ತಾ?

ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ವ್ಯಕ್ತಿಗೆ ದುಬೈ ಕೋರ್ಟ್​ ಗಡಿಪಾರು ಮಾಡಿ ಆದೇಶ ಹೊರಡಿಸಿದೆ. ಪ್ರಯಾಣಿಕರೊಬ್ಬರ ಬ್ಯಾಗ್​ನಿಂದ ಎರಡು ಮಾವಿನ ಹಣ್ಣುಗಳನ್ನು ಕದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.

By

Published : Sep 24, 2019, 9:57 PM IST

ಗಡಿಪಾರು

ಯುಎಇ:ಎರಡು ಮಾವಿನ ಹಣ್ಣು ಕಳ್ಳತನ ಮಾಡಿದ್ದ ಆರೋಪಿಯನ್ನು ದೇಶದಿಂದ ಗಡಿಪಾರು ಮಾಡಿ ಕೋರ್ಟ್​ ಆದೇಶ ಹೊರಡಿಸಿರುವ ವಿಚಿತ್ರ ಪ್ರಕರಣ ದುಬೈನಲ್ಲಿ ನಡೆದಿದೆ.

ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ವ್ಯಕ್ತಿಗೆ ದುಬೈ ಕೋರ್ಟ್​ ಗಡಿಪಾರು ಮಾಡಿ ಆದೇಶ ಹೊರಡಿಸಿದೆ. ಪ್ರಯಾಣಿಕರೊಬ್ಬರ ಬ್ಯಾಗ್​ನಿಂದ ಎರಡು ಮಾವಿನ ಹಣ್ಣುಗಳನ್ನು ಕದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.

27 ವರ್ಷದ ಕೆಲಸಗಾರನಿಗೆ ಈ ಶಿಕ್ಷೆ ವಿಧಿಸಲಾಗಿದ್ದು, ಗಡಿಪಾರಿನ ಜೊತೆಗೆ 5,000 ದಿರ್ಹಾಮ್ (dirham ) ದಂಡ ಕೂಡ ವಿಧಿಸಲಾಗಿದೆ. ಆತ ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ನಲ್ಲಿ ಕೆಲಸ ಮಾಡುತ್ತಿದ್ದ. ಪ್ರಯಾಣಿಕರ ಲಗೇಜ್​ಗಳನ್ನು ಕಂಟೇನರ್‌ನಿಂದ ಕನ್ವೇಯರ್ ಬೆಲ್ಟ್‌ಗೆ ಲೋಡ್ ಮಾಡುವುದು ಆರೋಪಿಯ ಕೆಲಸವಾಗಿತ್ತು.

ಆದರೆ ಆರೋಪಿಯು ಭಾರತಕ್ಕೆ ರವಾನೆಯಾಗಬೇಕಿದ್ದ ಹಣ್ಣಿನ ಬಾಕ್ಸ್​ನಿಂದ ಎರಡು ಮಾವಿನ ಹಣ್ಣುಗಳನ್ನು ಈತ ಕದ್ದಿದ್ದ. ಈತನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ABOUT THE AUTHOR

...view details