ಕರ್ನಾಟಕ

karnataka

By

Published : Oct 3, 2020, 6:07 PM IST

ETV Bharat / international

ಆಫ್ಘಾನಿಸ್ತಾನದಲ್ಲಿ ಕಾರ್​ ಬಾಂಬ್ ಸ್ಫೋಟಗೊಂಡು 15 ಜನರ ದುರ್ಮರಣ

ನಂಗರ್​ಹಾರ್ ಗವರ್ನರ್ ವಕ್ತಾರರು ಸಾವು-ನೋವುಗಳ ಮಾಹಿತಿ ದೃಢಪಡಿಸಿದ್ದಾರೆ. ಕೆಲವು ಬಂದೂಕುಧಾರಿಗಳು ಜಿಲ್ಲಾ ಗವರ್ನರ್ ಕಾಂಪೌಂಡ್​​ ಒಳಗೆ ಪ್ರವೇಶಿಸಲು ಮುಂದಾದರು. ಆದರೆ, ಭದ್ರತಾ ಪಡೆಗಳಿಂದ ಅವರನ್ನು ಹತ್ಯೆ ಮಾಡಿದರು ಎಂದು ಹೇಳಿದರು.

injured
ಸ್ಫೋಟದಲ್ಲಿ ಗಾಯಗೊಂಡವರು

ಕಾಬೂಲ್:ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಶನಿವಾರ ಕಾರ್ ಬಾಂಬ್ ಸ್ಫೋಟಗೊಂಡು ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಾನಿಖಿಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

ನಂಗರ್​ಹಾರ್ ಗವರ್ನರ್ ವಕ್ತಾರರು ಸಾವು-ನೋವುಗಳ ಮಾಹಿತಿ ದೃಢಪಡಿಸಿದ್ದಾರೆ. ಕೆಲವು ಬಂದೂಕುಧಾರಿಗಳು ಜಿಲ್ಲಾ ಗವರ್ನರ್ ಕಾಂಪೌಂಡ್​​ ಒಳಗೆ ಪ್ರವೇಶಿಸಲು ಮುಂದಾದರು. ಆದರೆ, ಭದ್ರತಾ ಪಡೆಗಳಿಂದ ಅವರನ್ನು ಹತ್ಯೆ ಮಾಡಿದರು ಎಂದು ಹೇಳಿದರು.

ದಾಳಿಯಲ್ಲಿ ಮೃತಪಟ್ಟವರಲ್ಲಿ ಕನಿಷ್ಠ ಎಂಟು ಮಂದಿ ನಾಗರಿಕರು ಎಂದು ನಂಗರ್​ಹಾರ್ ಪ್ರಾಂತೀಯ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details