ನ್ಯೂಯಾರ್ಕ್:ಮಾತನಾಡುವ, ಬೇರೆಯವರಿಗೆ ಉಪದೇಶ ಮಾಡುವ ಕಾಲ ಮುಗಿದಿದೆ. ಪ್ರಾಯೋಗಿಕವಾಗಿ ಮಾಡಿ ತೋರಿಸುವ ಬಹಳ ಮೌಲ್ಯಯುತವಾದುದು. ಅಂತಹ ಸಮಯ ನಮ್ಮ ಮುಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಜಾಗತಿಕ ಹವಾಮಾನ ಬದಲಾವಣೆ ಕುರಿತಂತೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಉನ್ನತ ಮಟ್ಟದ ಹವಾಮಾನ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಕೋಟ್ಯಂತರ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲಾಗಿದೆ. ಜಲ ಸಂಪನ್ಮೂಲ ಅಭಿವೃದ್ಧಿ, ಜಲ ಸಂರಕ್ಷಣೆ ಹಾಗೂ ಮಳೆನೀರು ಕೊಯ್ಲಿನ ಅಭಿವೃದ್ಧಿಗೆ 'ಜಲ ಜೀವನ್' ಮಿಷನ್ ಆರಂಭಿಸಲಾಗಿದೆ ಎಂದರು.