ಕರ್ನಾಟಕ

karnataka

By

Published : Nov 25, 2021, 5:59 PM IST

ETV Bharat / international

ಎಲ್​ ಸಾಲ್ವಾಡಾರ್​ ಸರ್ಕಾರದಿಂದ ಪತ್ರಕರ್ತರ ಮೇಲೆ ಬೇಹುಗಾರಿಕೆ ಆರೋಪ

ಕೇಂದ್ರ ಅಮೆರಿಕಾದ ಎಲ್​ ಸಾಲ್ವಾಡಾರ್​ನಲ್ಲಿ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಸಾಮಾಜಿಕ ಕಾರ್ಯಕರ್ತರ ಮೇಲೆ ಅಲ್ಲಿನ ಸರ್ಕಾರ ಗೂಢಚರ್ಯೆ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

salvadoran journalists spyware
ಪತ್ರಕರ್ತರ ಮೇಲೆ ಬೇಹುಗಾರಿಕೆ

ಎಲ್​ ಸಾಲ್ವಾಡಾರ್​:ಕೇಂದ್ರ ಅಮೆರಿಕಾದ ಎಲ್​ ಸಾಲ್ವಾಡಾರ್​ನಲ್ಲಿ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಸಾಮಾಜಿಕ ಕಾರ್ಯಕರ್ತರ ಮೇಲೆ ಅಲ್ಲಿನ ಸರ್ಕಾರ ಗೂಢಚರ್ಯೆ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸಾಲ್ವಾಡಾರ್​ ಸರ್ಕಾರ ಪೆಗಾಸಸ್​ ತಂತ್ರಾಂಶ ಅನ್ನು ಬಳಸಿಕೊಂಡು ಬೇಹುಗಾರಿಕೆ ನಡೆಸುತ್ತಿದೆ. ಈ ಕುರಿತು ಆ್ಯಪಲ್​ ಇನ್​ ಸಂಸ್ಥೆಯಿಂದ ಮಾಹಿತಿ ಲಭ್ಯವಾಗಿದೆ. ಸಂಭಾವ್ಯ ಬೇಹುಗಾರಿಕೆಯು 23 ಪತ್ರಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಸಲಾಗುತ್ತಿದೆ. ಬೇಹುಗಾರಿಕೆಗೆ ಒಳಗಾದ ಬಗ್ಗೆ ಅವರೆಲ್ಲರಿಗೂ ಮಾಹಿತಿ ನೀಡಲಾಗಿದೆ ಎಂದು ಸಾಲ್ವಾಡಾರ್​ ಪತ್ರಕರ್ತರ ಸಂಘ ತಿಳಿಸಿದೆ.

ಸರ್ಕಾರ ಯಾರ ಮೇಲೂ ಬೇಹುಗಾರಿಕೆ ನಡೆಸುತ್ತಿಲ್ಲ ಎಂದು ಸಾಲ್ವಾಡಾರ್​ ಅಧ್ಯಕ್ಷ ನಯೀಬ್​ ಬುಕೆಲೆ ಆರೋಪವನ್ನು ತಳ್ಳಿ ಹಾಕಿದ್ದಾರೆ.

ABOUT THE AUTHOR

...view details