ಕರ್ನಾಟಕ

karnataka

By

Published : Feb 22, 2022, 7:15 AM IST

ETV Bharat / international

ಉಕ್ರೇನ್ ಬಂಡುಕೋರರ ಪ್ರದೇಶಗಳಲ್ಲಿ ರಷ್ಯಾ ಸೇನೆ ನಿಯೋಜನೆಗೆ ಪುಟಿನ್​ ಆದೇಶ: ಹೆಚ್ಚಿದ ಯುದ್ಧ ಭೀತಿ

ಉಕ್ರೇನ್​ ಪ್ರತ್ಯೇಕತಾವಾದಿಗಳಿಗೆ ರಷ್ಯಾ ಬೆಂಬಲದ ಬಳಿಕ ಇದೀಗ ಆ ಪ್ರದೇಶಗಳಲ್ಲಿ 'ಶಾಂತಿಪಾಲನಾ ಕಾರ್ಯಾಚರಣೆ' ಹೆಸರಿನಲ್ಲಿ ರಷ್ಯಾ ಸೇನೆ ಪೂರ್ವ ಉಕ್ರೇನ್​ನತ್ತ ಸಾಗುತ್ತಿದೆ. ಇದು ಉಕ್ರೇನ್​ ಮೇಲೆ ರಷ್ಯಾ ಆಕ್ರಮಣದ ಪ್ರಾರಂಭಿಕ ನಡೆ ಎಂದು ಹೇಳಲಾಗುತ್ತಿದೆ.

Ukraine after
ಪುಟಿನ್​ ಆದೇಶ

ಮಾಸ್ಕೋ(ರಷ್ಯಾ):ಉಕ್ರೇನ್​ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪೂರ್ವ ಉಕ್ರೇನ್​ನ ಎರಡು ಪ್ರದೇಶಗಳನ್ನು 'ಸ್ವತಂತ್ರ'ವೆಂದು ಘೋಷಿಸಿ, ಅಲ್ಲಿ ತನ್ನ ಸೈನ್ಯವನ್ನು ನಿಯೋಜಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಆದೇಶಿಸಿದ್ದಾರೆ. ಇದು ರಷ್ಯಾ- ಉಕ್ರೇನ್​ ಮಧ್ಯೆ ಯುದ್ಧದ ಕಾರ್ಮೋಡವನ್ನು ಮತ್ತಷ್ಟು ಹೆಚ್ಚಿಸಿದೆ.

ಉಕ್ರೇನ್​ ಪ್ರತ್ಯೇಕತಾವಾದಿಗಳಿಗೆ ರಷ್ಯಾ ಬೆಂಬಲದ ಬಳಿಕ ಇದೀಗ ಆ ಪ್ರದೇಶಗಳಲ್ಲಿ ಶಾಂತಿಪಾಲನಾ ಕಾರ್ಯಾಚರಣೆ ಹೆಸರಿನಲ್ಲಿ ರಷ್ಯಾ ಸೇನೆ ಪೂರ್ವ ಉಕ್ರೇನ್​ನತ್ತ ಸಾಗುತ್ತಿದೆ. ಇದು ಉಕ್ರೇನ್​ ಮೇಲೆ ರಷ್ಯಾ ಆಕ್ರಮಣದ ಪ್ರಾರಂಭಿಕ ನಡೆ ಎಂದು ಹೇಳಲಾಗುತ್ತಿದೆ.

ಪೂರ್ವ ಉಕ್ರೇನ್​ನ ಪ್ರತ್ಯೇಕತಾವಾದಿಗಳ ಪ್ರದೇಶಗಳ ಮೇಲೆ ರಷ್ಯಾ ಎಷ್ಟು ಪ್ರಮಾಣದ ಸೈನ್ಯವನ್ನು ಕಳುಹಿಸುತ್ತಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಉಕ್ರೇನ್​ನಿಂದ ಬೇರ್ಪಟ್ಟ ಈ ಪ್ರದೇಶಗಳಲ್ಲಿ ಶಾಂತಿಪಾಲನೆಗಾಗಿ ತನ್ನ ಸೇನೆಯನ್ನು ನೆಲೆಗೊಳಿಸಲಾಗುತ್ತಿದೆ ಎಂದು ರಷ್ಯಾ ಹೇಳಿಕೊಂಡಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ವ್ಲಾಡಿಮಿರ್ ಪುಟಿನ್​, ಪೂರ್ವ ಉಕ್ರೇನ್​ ಈ ಹಿಂದಿನಿಂದಲೂ ರಷ್ಯಾದ ಭಾಗವಾಗಿದೆ. ಇದು ದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ. ಇಲ್ಲಿ ತನ್ನ ಸೇನೆಯನ್ನು ನಿಯೋಜಿಸುತ್ತಿರುವುದಕ್ಕೆ ರಷ್ಯಾದ ಜನರು ಸರ್ಕಾರವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಪೂರ್ವ ಉಕ್ರೇನ್​ ಪ್ರದೇಶಗಳ ಮೇಲೆ ರಷ್ಯಾ ಸೇನೆಯನ್ನು ನೆಲೆಗೊಳಿಸುವ ಬಗ್ಗೆ ಪುಟಿನ್​ ಅವರು, ಜರ್ಮನಿ ಮತ್ತು ಫ್ರಾನ್ಸ್​ ಅಧ್ಯಕ್ಷರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಈ ಬಗ್ಗೆ ಇಬ್ಬರೂ ಅಧ್ಯಕ್ಷರು ನಿರಾಶೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಉಕ್ರೇನ್​ ಬಿಕ್ಕಟ್ಟು: ಭದ್ರತಾ ಮಂಡಳಿಯ ತುರ್ತು ಸಭೆ ಕರೆದ ವಿಶ್ವಸಂಸ್ಥೆ

ABOUT THE AUTHOR

...view details